ಕಾಂಚೋಡು ಜಾತ್ರೋತ್ಸವಕ್ಕೆ ಗೊನೆಮುಹೂರ್ತ

0

ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಫೆ. 11ರಿಂದ 15ರ ತನಕ ಜರಗಲಿದ್ದು, ಗೊನೆ ಮುಹೂರ್ತ ಫೆ. 4ರಂದು ನಡೆಯಿತು.
ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಧರ್ಮದರ್ಶಿ ಪರಮೇಶ್ವರಯ್ಯ ಕಾಂಚೋಡು ದೇವತಾ ಪ್ರಾರ್ಥನೆ ನೆರವೇರಿಸಿದರು.


ಅರ್ಚಕ ಕೆ.ಎಸ್. ಗೋವಿಂದ ಭಟ್ ಆಡಳಿತ ಮಂಡಳಿ ಉಪಾಧ್ಯಕ್ಷ ಶ್ರೀನಾಥ್ ರೈ ಬಾಳಿಲ, ಕಾರ್ಯದರ್ಶಿ ಹರ್ಷ ಜೋಗಿಬೆಟ್ಟು, ಕೋಶಾಧಿಕಾರಿ ಸುಧಾಕರ ರೈ ಎ.ಎಂ, ಸಹಾಯಕ ಅರ್ಚಕ ಮೋಹನ ಗುಂಡಿಹಿತ್ಲು, ಆಡಳಿತ ಮಂಡಳಿ ಸದಸ್ಯರಾದ ವೆಂಕಟಕೃಷ್ಣ ಗೌತಮ್, ಜಾತ್ರೋತ್ಸವ ಸಮಿತಿ ಅಧ್ಯಕ್ಷೆ ಜಾಹ್ನವಿ ಕಾಂಚೋಡು, ಕಾರ್ಯದರ್ಶಿ ರವಿಶಂಕರ ಕಾಂಚೋಡು, ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎಂ. ಕೂಸಪ್ಪ ಗೌಡ ಮುಗುಪ್ಪು, ಬಾಳಿಲ ಗ್ರಾ.ಪಂ. ಮಾಜಿ ಅಧ್ಯಕ್ಷ ರಾಧಾಕೃಷ್ಣ ಉಡುವೆಕೋಡಿ, ಸದಸ್ಯ ತಾ.ಪಂ. ಸಹಾಯಕ ನಿರ್ದೇಶಕರಾದ ಚೆನ್ನಪ್ಪ ಗೌಡ ಕಜೆಮೂಲೆ, ದೈವ ನರ್ತಕರಾದ ಶೇಷಪ್ಪ ಪರವ ಬಾಳಿಲ, ರಾಮಚಂದ್ರ ಭಟ್ ಕಾಯಾರ, ಸತ್ಯಮೂರ್ತಿ ಬಾಳಿಲ, ಜಯರಾಮ ಅಜಿಲ ಬಾಳಿಲ, ತಾರಾನಾಥ ಮಡಿವಾಳ ಸೇರಿದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ.ಯ ವಲಯ ಮೇಲ್ವಿಚಾರಕ ಗೋಪಾಲಕೃಷ್ಣ ನಾವೂರು, ಬಾಳಿಲ, ಮುಪ್ಪೇರ್ಯ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.