ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರಾ ಮಹೋತ್ಸವ ಪ್ರಾರಂಭ

0

ಇತಿಹಾಸ ಪ್ರಸಿದ್ಧ ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವವು ಫೆ.13 ರಿಂದ ಪ್ರಾರಂಭಗೊಂಡಿದ್ದು ಫೆ.17 ರವರೆಗೆ ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ,ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.


ಫೆ .09 ರಂದು ಗೊನೆ ಮುಹೂರ್ತ ನಡೆಯಿತು.

ಫೆ.13 ರಂದು ಬೆಳಿಗ್ಗೆ ಉಗ್ರಾಣ ಮುಹೂರ್ತ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕ ಉದಯಕುಮಾರ್ ಕೆ.ಟಿ.ಪೂಜಾ ಕಾರ್ಯ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು ಹಾಗೂ ಸದಸ್ಯರು ,ಭಕ್ತಾದಿಗಳು ಉಪಸ್ಥಿತರಿದ್ದರು. ಸಂಜೆ 5.30 ಕ್ಕೆ ತಂತ್ರಿಗಳ ಆಗಮನ,ಸ್ವಾಗತ,ಪ್ರಾರ್ಥನೆ,ದೀಪಾರಾಧನೆ ನಡೆಯಲಿದೆ. ರಾತ್ರಿ ಗಂಟೆ 7.00 ಕ್ಕೆ ಧ್ವಜಾರೋಹಣ,ಬಯನ ಬಲಿ,ರಾತ್ರಿ ಪೂಜೆ,ನೃತ್ಯ ಬಲಿ ನಡೆಯಲಿದೆ.


ಫೆ.14 ರಂದು ಬೆಳಿಗ್ಗೆ ಗಂಟೆ 7.00 ಕ್ಕೆ ಗಣಪತಿ ಹವನ,ಉಷಾ: ಪೂಜೆ,ಶಿವೇಲಿ,ನವಕ ಕಲಶಾಭಿಷೇಕ,ಮಧ್ಯಾಹ್ನ ಗಂಟೆ 12.00 ಕ್ಕೆ ಮಹಾಪೂಜೆ,ಶಿವೇಲಿ,ಅನ್ನಪ್ರಸಾದ ನಡೆಯಲಿದೆ. ರಾತ್ರಿ ಗಂಟೆ 7.30 ಕ್ಕೆ ಶಿವೇಲಿ,ದರ್ಶನ ಬಲಿ ನಡೆಯಲಿದೆ. ರಾತ್ರಿ ಗಂಟೆ 10.00 ರಿಂದ ಮಹಾಪೂಜೆ,ಪ್ರಸಾದ ವಿತರಣೆ ನಡೆಯಲಿದೆ.

ಫೆ.15 ರಂದು ಬೆಳಿಗ್ಗೆ ಗಂಟೆ 7.00 ಕ್ಕೆ ಗಣಪತಿ ಹವನ,ಉಷಾ:ಪೂಜೆ,ಬೆಳಿಗ್ಗೆ 8.00ಕ್ಕೆ ಶಿವೇಲಿ,ನವಕ ಕಲಶಾಭಿಷೇಕ,ಮಧ್ಯಾಹ್ನ ಗಂಟೆ 12.00 ಕ್ಕೆ ಮಹಾಪೂಜೆ,ಶಿವೇಲಿ,ಅನ್ನಪ್ರಸಾದ ನಡೆಯಲಿದೆ.
ರಾತ್ರಿ ಗಂಟೆ 7.00 ಕ್ಕೆ ರಾತ್ರಿ ಪೂಜೆ,7.30 ಕ್ಕೆ ನೃತ್ಯ ಬಲಿ ನಡೆಯಲಿದೆ.


ಫೆ.16 ರಂದು ಬೆಳಿಗ್ಗೆ ಗಂಟೆ 7.00 ಕ್ಕೆ ಗಣಪತಿ ಹವನ,ಉಷಾ:ಪೂಜೆ ನಡೆಯಲಿದೆ. ಬೆಳಿಗ್ಗೆ 8.00 ಕ್ಕೆ ಶಿವೇಲಿ,ನವಕ ಕಲಶಾಭಿಷೇಕ ನಡೆಯಲಿದೆ. ಮಧ್ಯಾಹ್ನ 12.00 ಕ್ಕೆ ಮಹಾಪೂಜೆ,ಶಿವೇಲಿ,ಅನ್ನಪ್ರಸಾದ ನಡೆಯಲಿದೆ.ಸಂಜೆ ಗಂಟೆ 5.00 ಕ್ಕೆ ಶ್ರೀ ಭೂತಬಲಿ,ಸೇವೆ ಸುತ್ತು,ಪೇಟೆ ಸವಾರಿ,ಸಿಡಿಮದ್ದು ಪ್ರದರ್ಶನ ನಡೆಯಲಿದೆ. ರಾತ್ರಿ ಗಂಟೆ 9.00 ಕ್ಕೆ ರಾತ್ರಿ ಪೂಜೆ,10.00 ಕ್ಕೆ ಶಯನ,ಕವಾಟಬಂಧನ ನಡೆಯಲಿದೆ.


ಫೆ.17 ರಂದು ಬೆಳಿಗ್ಗೆ ಗಂಟೆ 7.00 ಕ್ಕೆ ಕವಾಟೋದ್ಘಾಟನೆ,ತೈಲಾಭ್ಯಂಜನ ನಡೆಯಲಿದೆ. 8.00 ಕ್ಕೆ ಉಷಾಪೂಜೆ,ಆರಾಟು ಬಲಿ,ಬೆಳಿಗ್ಗೆ 9.30 ಕ್ಕೆ ಅವಭೃತ ಸ್ನಾನ ,ದರ್ಶನ ಬಲಿ ನಡೆಯಲಿದೆ.
ಮಧ್ಯಾಹ್ನ 11.30 ಕ್ಕೆ ರಾಜಾಂಗಣ ಪ್ರಸಾದ,ಬಟ್ಟಲುಕಾಣಿಕೆ,ಧ್ವಜ ಅವರೋಹಣ,ಸಂಪ್ರೋಕ್ಷಣೆ,ಮಹಾಪೂಜೆ,ಮಂತ್ರಾಕ್ಷತೆ,ಅನ್ನಪ್ರಸಾದ ನಡೆಯಲಿದೆ. ರಾತ್ರಿ 7.30ಕ್ಕೆ ಅಗ್ನಿಗುಳಿಗ ದೈವದ ಭಂಡಾರ ತೆಗೆಯುವುದು.ಭೂತಕೋಲ,ಬಟ್ಟಲುಕಾಣಿಕೆ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸರ್ವರೀತಿಯಲ್ಲೂ ಸಹಕರಿಸಿ,ಪ್ರಸಾದವನ್ನು ಸ್ವೀಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು ತಿಳಿಸಿದ್ದಾರೆ.