ಗೌರಿತಾಳಿಗೆ ರಾಷ್ಟ್ರೀಯ ಯೋಗ ರತ್ನ ಪ್ರಶಸ್ತಿ

0

ಯೋಗ ಪಟು ಗೌರಿತಾಳಿಗೆ ರಾಷ್ಟ್ರೀಯ ಯೋಗ ರತ್ನ ಪ್ರಶಸ್ತಿ ಫೆಬ್ರವರಿ 11ರಂದು ಕರ್ನಾಟಕದ ವಿದ್ಯಾವರ್ಧಕ ಸಂಘ ಧಾರವಾಡದಲ್ಲಿ ನಡೆಯಿತು.

ಚಿರಾಯು ಅಸೋಸಿಯೇಷನ್ ಕರ್ನಾಟಕ ಹಾಗೂ ಜನ ಸೇವಾ ಫೌಂಡೇಶನ್ ಇದರ ಸಹಯೋಗದೊಂದಿಗೆ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪುರಸ್ಕಾರ ಹಾಗೂ ಚಿರಾಯು ಕನ್ನಡ ಟಿವಿ ಡಿಜಿಟಲ್ ಮೀಡಿಯಾ ಉದ್ಘಾಟನೆಯ ಸಮಾರಂಭದಲ್ಲಿ
ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀ ವೇ. ಮೂ. ಬಸವಲಿಂಗಯ್ಯ ಶಾಸ್ತ್ರಿಗಳು ಸೂರಣಿಗಿಮಠ, ಅಧ್ಯಕ್ಷರು ದಿವ್ಯ ಜ್ಞಾನ ಗುರುಕುಲ ಮತ್ತು ಜ್ಯೋತಿಷ್ಯ ಕೇಂದ್ರ ಹುಬ್ಬಳ್ಳಿ ಶ್ರೀ ವೇ. ಮೂ. ಡಾ ಕಾಡಯ್ಯ ಶಿವಮೂರ್ತಿ ಹಿರೇಮಠ ,ಪ.ಪೂ.ವೇ.ಬ್.ಶ್ರೀ ಡಾ. ರಮೇಶ ಕುಮಾರ ಶಾಸ್ತ್ರಿಗಳು, ಶ್ರೀ ವೇ.ಮೂ.ಡಾಸತೀಶ ಮಲ್ಲಯ್ಯಾ ಸ್ವಾಮಿ ಶಾಸ್ತ್ರಿಗಳು , ಶ್ರೀ ಡಾ. ಸಂತೋಷ ಶಾಸ್ತ್ರಿಗಳು ಸೋ. ಹಿರೇಮಠ, ಶ್ರೀ ಬಸವರಾಜ ಸವಣೂರ, ಎಎಸ್ಐ ಧಾರವಾಡ, ಡಾ. ಎಫ್ . ಕೆ. ನಿಗದಿ,ಅಧ್ಯಕ್ಷರು , ಜನಸೇವಾ ಫೌಂಡೇಶನ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.ಈಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಇವಳು ಡಾ. ಗೌತಮ್ ಮತ್ತು ಡಾ. ರಾಜೇಶ್ವರಿ ರವರ ಪುತ್ರಿ .ಇವಳು ಯೋಗಾಭ್ಯಾಸವನ್ನು ಯೋಗ ಗುರು ಶರತ್ ಮರ್ಗಿಲಡ್ಕ ರವರಲ್ಲಿ ಅಮರ ಯೋಗ ಕೇಂದ್ರ ಗುತ್ತಿಗಾರಿನಲ್ಲಿ ಪಡೆಯುತ್ತಿದ್ದಾಳೆ.