ಅಜ್ಜಾವರ : ಮಾಹಿತಿ ಕಾರ್ಯಾಗಾರ

0

ತೋಟಗಾರಿಕೆ ಇಲಾಖೆ ಸುಳ್ಯ ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ದ.ಕ.ಜಿಲ್ಲಾ ಘಟಕ. ಹಾಗೂ ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘ ಶಾಖೆ ಸುಳ್ಯ ಇವರುಗಳ ಸಹಬಾಗಿತ್ವದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿ ಕೃಷಿ ಮತ್ತು ಇಲಾಖೆಯಿಂದ ದೊರಕುವ ಸೌಲಭ್ಯದ ಬಗ್ಗೆ ಮಾಹಿತಿ ಕಾರ್ಯಾಗಾರ ಅಜ್ಜಾವರದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಕೆನರಾ ಬ್ಯಾಂಕ್ ಮ್ಯಾನೇಜರ್ ರಾದ ರಾಮಚಂದ್ರ ಪಲ್ಲತ್ತಡ್ಕ ವಹಿಸಿದ್ದರು. ಮಾಹಿತಿಯನ್ನು ತೋಟಗಾರಿಕೆ ಇಲಾಖೆಯ ವಿಜೇತ್ ಎಸ್.ನೀಡಿದರು.

ವೇದಿಕೆಯಲ್ಲಿ ನಿವೃತ್ತ ಅರಣ್ಯ ರಕ್ಷಕರಾದ ರಾಮ ಗಾರ್ಡ್ ಪಲ್ಲತ್ತಡ್ಕ , ಅಜ್ಜಾವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಆನಂದ ಮುಳ್ಯ ಹೊಸಗದ್ದೆ, ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ ಕೆ. ಪಲ್ಲತ್ತಡ್ಕ , ಗಿರಿ ಜಾಸುತ ಅರ್ತ್ ಮೂವರ್ಸ್ ನ ಮ್ಹಾಲಕರಾದ ಸೀತಾರಾಮ ಬೀನಡ್ಕ, ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಅಜ್ಜಾವರ ಘಟಕದ ಅಧ್ಯಕ್ಷರಾದ ಹರೀಶ್ ಮೇನಾಲ ಉಪಸ್ಥಿತರಿದ್ದರು. ಕರುಣಾಕರ ಪಲ್ಲತ್ತಡ್ಕ ಪ್ರಾಸ್ತಾವಿಕ ಮಾತನಾಡಿದರು.