ಪಂಜ ಫ್ರೆಂಡ್ಸ್ ಸರ್ಕಲ್ ನ ಪೂರ್ವಾಧ್ಯಕ್ಷ ಅನಂತಕೃಷ್ಣ ಆಚಾರ್ಯ ಕೃಷ್ಣನಗರ ನಿಧನ

0

ಪಂಜದ ಕೃಷ್ಣನಗರ ಅನಂತಕೃಷ್ಣ ಆಚಾರ್ಯ ರವರು ಅಲ್ಪ ಕಾಲದ ಅಸೌಖ್ಯದಿಂದ ಮಾ.8 ರಂದು ಮುಂಜಾನೆ ಸ್ವಗೃಹದಲ್ಲಿ ನಿಧನರಾದರು.

ಅವರು ಫ್ರೆಂಡ್ಸ್ ಸರ್ಕಲ್ ಕೃಷ್ಣನಗರ ಪಂಜ ಇದರ ಪೂರ್ವಾಧ್ಯಕ್ಷರಾಗಿ, ಸದಸ್ಯರಾಗಿ‌ ಸೇವೆ ಸಲ್ಲಿಸಿದ್ದರು.
ಹಿಂದೆ ಪಂಜ ಪರಿಸರದಲ್ಲಿ ಚದ್ಮ ವೇಷ ಸ್ಪರ್ಧೆಗಳಲ್ಲಿ ನಿರಂತರವಾಗಿ ಪ್ರಶಸ್ತಿ ಪಡೆದು ಖ್ಯಾತಿ ಪಡೆದಿದ್ದರು.
ಅವರಿಗೆ 73 ವರುಷ ವಯಸ್ಸಾಗಿತ್ತು. ಮೃತರು ಪುತ್ರ ಕುಸುಮಾಧರ ಆಚಾರ್ಯ, ಪುತ್ರಿಯರಾದ ಶ್ರೀಮತಿ ತುಳಸಿ ಸೀತಾರಾಮ ಆಚಾರ್ಯ ಕುಕ್ಕಾಜೆ, ಶ್ರೀಮತಿ ಯಶೋಧ ಅಶೋಕ ಆಚಾರ್ಯ ಪಂಜಿಕಲ್ಲು, ಶ್ರೀಮತಿ ಪಾರ್ವತಿ ನಾಗೇಶ್ ಆಚಾರ್ಯ ಅನಂತಾಡಿ, ಸೊಸೆ, ಅಳಿಯಂದಿರು, ಮೊಮ್ಮಕ್ಕಳು, ಬಂಧು ಮಿತ್ರರು,ಕುಟುಂಬಸ್ಥರನ್ನು ಅಗಲಿದ್ದಾರೆ.