ಮಿನುಂಗೂರು ದೇವಸ್ಥಾನ ಜೀರ್ಣೋದ್ಧಾರಸಂಘಸಂಸ್ಥೆಗಳಿಂದ-ಊರಿನ ಭಕ್ತರಿಂದ ಶ್ರಮದಾನ

0

ನಿತ್ಯನಿಧಿ ಸಂಗ್ರಹ ಆರಂಭ-ಸಂಗ್ರಹಕರ ಮೂಲಕ ದೇವಸ್ಥಾನಕ್ಕೆ ಸಮರ್ಪಣೆ – ವಿಶೇಷ ಪೂಜೆ

ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳಿಗೆ ಒಳಪಟ್ಟ ಪಂಚಸ್ಥಾಪನೆಗಳಲ್ಲಿ ಒಂದಾದ ಕಾರಣಿಕ ಕ್ಷೇತ್ರ ಇತಿಹಾಸ ಪ್ರಸಿದ್ಧ ಮಿನುಂಗೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜೀರ್ಣೋದ್ಧಾರ ಗೊಳ್ಳುತ್ತಿದ್ದು, ಈಗಾಗಲೇ ಕೆಲಸ ಕಾರ್ಯಗಳು ಆರಂಭಗೊಂಡಿದೆ. ಸಂಘಸಂಸ್ಥೆಗಳಿಂದ ಊರಿನ ಭಕ್ತರಿಂದ ಶ್ರಮದಾನಗಳು ನಡೆಯುತ್ತಿದೆ.

ಜೀರ್ಣೋದ್ಧಾರದ ಪ್ರಯುಕ್ತ ಉಭಯ ಗ್ರಾಮದ ಮನೆಗಳಿಂದ ನಿತ್ಯ ನಿಧಿ ಸಂಗ್ರಹ ಆರಂಭಿಸಲಾಗಿದ್ದು, ಮಾ.19ರಂದು ನಿತ್ಯನಿಧಿ ಸಂಗ್ರಹಕರು ಧನ ಸಂಗ್ರಹ ಮಾಡಿ ಮಾ.20ರಂದು ದೇವಸ್ಥಾನಕ್ಕೆ ಸಮರ್ಪಣೆ ನಡೆಯಿತು. ಈ ಪ್ರಯುಕ್ತ ತಂತ್ರಿಗಳ ನಿರ್ದೇಶನದಂತೆ ಮಧ್ಯಾಹ್ನ ದೇವರಿಗೆ ದುರ್ಗಾ ಹೋಮ ವಿಶೇಷವಾಗಿ ನಡೆಯಿತು.