ಭಕ್ತಿ,ಸಂಭ್ರಮದಿಂದ ನಡೆದ ಕಳಂಜ ಶ್ರೀ ಮಹಾವಿಷ್ಣುಮೂರ್ತಿ ಒತ್ತೆಕೋಲ

0

ಶ್ರೀ ವಿಷ್ಣುಮೂರ್ತಿ ಸೇವಾ ಟ್ರಸ್ಟ್ ಕಳಂಜ ವತಿಯಿಂದ ಕಳಂಜ ಶ್ರೀ ಮಹಾವಿಷ್ಣುಮೂರ್ತಿ ಒತ್ತೆಕೋಲವು ಮಾ.19 ಮತ್ತು ಮಾ.20ರಂದು ನಡೆಯಿತು.
ಮಾ.19 ರಂದು ಸಂಜೆ ಸ್ಥಾನದಿಂದ ಭಂಡಾರ ತೆಗೆಯಲಾಯಿತು.
ರಾತ್ರಿ ಮೇಲೇರಿಗೆ ಅಗ್ನಿ ಸ್ಪರ್ಶ ಮಾಡಲಾಯಿತು.
ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ಬಳಿಕ ರಾತ್ರಿ ಕುಳಿಚಟ್ಟು ನಡೆಯಿತು.
ಮಾ.20 ರಂದು ಪ್ರಾತ:ಕಾಲ ದೈವದ ಅಗ್ನಿಪ್ರವೇಶ ನಡೆದು ಮಾರಿಕಳ ನಡೆದ ಬಳಿಕ ಪ್ರಸಾದ ವಿತರಣೆ ನಡೆಯಿತು.
ನಂತರ ಗುಳಿಗ ದೈವದ ನೇಮ ನಡೆಯಿತು.

ಮಾ.19 ರಂದು ರಾತ್ರಿ ಅಂಗನವಾಡಿ ಪುಟಾಣಿಗಳಿಂದ ಹಾಗೂ ಸ್ಥಳೀಯ ಪ್ರತಿಭೆಗಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.
ನಂತರ ನಾಳ ಶ್ರೀ ಶಿರಿಡಿ ಸಾಯಿಬಾಬಾ ಮಂದಿರ ಆಶ್ರಿತ ಸಾಯಿಶಕ್ತಿ ಕಲಾ ಬಳಗ ಉರ್ವ ಚಿಲಿಂಬಿ, ಮಂಗಳೂರು ಇವರಿಂದ ತುಳು ಪೌರಾಣಿಕ ನಾಟಕ “ಬೊಳ್ಳಿಮಲೆತ ಶಿವಶಕ್ತಿಲು” ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ವಿಷ್ಣುಮೂರ್ತಿ ಸೇವಾ ಟ್ರಸ್ಟ್ ನ ಗೌರವಾಧ್ಯಕ್ಷರಾದ ರಘುನಾಥ ರೈ ಕಳಂಜ,ಅಧ್ಯಕ್ಷರಾದ ಕರುಣಾಕರ ಶೆಟ್ಟಿ ನಾಲ್ಗುತ್ತು,ಕಾರ್ಯದರ್ಶಿ ಸತೀಶ್ ಕಳಂಜ, ಉಪಾಧ್ಯಕ್ಷ ರವೀಂದ್ರನಾಥ ರೈ ಗುರಿಕ್ಕಾನ, ಖಜಾಂಜಿ ರಾಜೇಶ್ ಅಮೀನ್ ಪಟ್ಟೆ,ಜೊತೆ ಕಾರ್ಯದರ್ಶಿ ಗಗನ್ ನಾಲ್ಗುತ್ತು ಮತ್ತು ಸರ್ವಸದಸ್ಯರು ಹಾಗೂ ಸಾವಿರಾರು ಜನ ಭಕ್ತಾದಿಗಳು ಉಪಸ್ಥಿತರಿದ್ದರು.