ಮಿಥುನ್ ಗೌಡ ಮಲ್ಲಾರ ರಾಷ್ಟ್ರೀಯ ಕಬಡ್ಡಿ ಪಂದ್ಯಾಟದಲ್ಲಿ ಭಾಗಿ

0

ಎನೇಕಲ್ಲಿನ ಮಿಥುನ್ ಗೌಡ ಮಲ್ಲಾರ ಅವರು ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿ ರಾಷ್ಟ್ರೀಯ ಕಬಡ್ಡಿ ಟೂರ್ನಮೆಂಟ್ ಪಂದ್ಯಾಟದಲ್ಲಿ ಕಬಡ್ಡಿ ಆಟವಾಡುತ್ತಿದ್ದಾರೆ. ಇವರು ಶ್ರೀ ಉಮಾಮಹೇಶ್ವರಿ ಕಬ್ಬಡಿ ಅಕಾಡೆಮಿ ಮಂಗಳೂರು ಇದರ ಸದಸ್ಯರಾಗಿದ್ದು ಇಂದಿನಿಂದ ಮಹಾರಾಷ್ಟ್ರ ನಡೆಯುವ ರಾಷ್ಟ್ರೀಯ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸುತ್ತಿದ್ದಾರೆ. ಇವರು ಗೋಕರ್ಣನಾಥೇಶ್ವರ ಕಾಲೇಜಿನ ಪೈನಲ್ ಬಿ.ಎ ವಿದ್ಯಾರ್ಥಿ. ಏನೆಕಲ್ಲು ಗ್ರಾಮದ ಸುಂದರ ಗೌಡ ಮತ್ತು ವಸಂತಿ ದಂಪತಿಗಳ ಪುತ್ರ.