ರಾಜ್ಯ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿಯವರಿಗೆ ಜಾಲ್ಸೂರು ಪಯಸ್ವಿನಿ ಪ್ರೌಢಶಾಲಾ ವತಿಯಿಂದ ಗೌರವ

0

ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ನೇಮಗೊಂಡ ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ನಿರ್ದೇಶಕ ಸದಾನಂದ ಮಾವಜಿ ಅವರನ್ನು ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಮತ್ತು ಪಯಸ್ವಿನಿ ಪ್ರೌಢಶಾಲೆ ಜಾಲ್ಸೂರು ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ದೇರಣ್ಣ ಗೌಡ ಅಡ್ಡಂತಡ್ಕ ಹಾಗೂ ಪಯಸ್ವಿನಿ ಪ್ರೌಢಶಾಲಾ ಸಂಚಾಲಕ ಜಾಕೆ ಸದಾನಂದ ಗೌಡ ಅವರು ಸದಾನಂದ ಮಾವಜಿ ಅವರನ್ನು ಸನ್ಮಾನಿಸಿದರು.
ನಿರ್ದೇಶಕರಾದ ರಾಮಚಂದ್ರ ಎಂ., ಜಯರಾಮ ರೈ ಜಾಲ್ಸೂರು, ವಸಂತ ಮಾಸ್ತರ್ ಕೇಪು, ಮೋನಪ್ಪ ಕೆ., ಜನಾರ್ದನ ಗೌಡ ಬರೆ ಮೇಲು, ಶಾಲಾ ಮುಖ್ಯ ಶಿಕ್ಷಕಿ ಜಯಲತಾ ಕೆ.ಆರ್., ಶಿಕ್ಷಕ ರಾದ ಮೀನಕುಮಾರಿ, ಶಿವಪ್ರಕಾಶ್ ಕೆ., ಸವಿತಾ ಕುಮಾರಿ, ಕುಮಾರ ಲಮಾಣಿ, ಸಿಬ್ಬಂದಿ ಬೇಬಿ ಕೆ ಇದ್ದರು.