ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ‌ ಪಕ್ಷ ಸ್ಪರ್ಧೆ

0

ಅಭ್ಯರ್ಥಿಯಾಗಿ ಸುಳ್ಯದ ರಂಜಿನಿ ಮೊಟ್ಟೆಮನೆಯವರಿಗೆ ಟಿಕೆಟ್ ಘೋಷಣೆ

ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರದಲ್ಲಿ ಈ ಬಾರಿ ಕರ್ನಾಟಕ ರಾಷ್ಟ್ರ ಸಮಿತಿ‌ ಪಕ್ಷ ಸ್ಪರ್ಧೆ ನಡೆಸಲಿದ್ದು, ಅಭ್ಯರ್ಥಿಯಾಗಿ ಸುಳ್ಯದ ರಂಜಿನಿ ಮೊಟ್ಟೆಮನೆಯವರಿಗೆ ಟಿಕೆಟ್ ಘೋಷಣೆಯಾಗಿದೆ.

ಭ್ರಷ್ಟಾಚಾರ ವಿರುದ್ಧ ಸಮರ ಸಾರಿರುವ ರವಿ ಕೃಷ್ಣಾ ರೆಡ್ಡಿಯವರ ಕೆ.ಆರ್.ಎಸ್. ಪಕ್ಷ ಕಾವೇರಿ ಹೋರಾಟ, ಸೌಜನ್ಯ ಪರ ಹೋರಾಟ ಸೇರಿದಂತೆ ಹಲವು ಆಂದೋಲನಗಳಲ್ಲಿ ಭಾಗಿಯಾಗಿದ್ದು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದ ಮೊಟ್ಟೆ ಮನೆ ದಿ.ಶಿವಪ್ಪ ಗೌಡ – ಸುಶೀಲ ದಂಪತಿಯ ಪುತ್ರಿಯಾಗಿರುವ ರಂಜಿನಿಯವರಿಗೆ ಟಿಕೆಟ್ ಘೋಷಣೆಯಾಗಿದೆ.

ಸುಳ್ಯ ಮತ್ತಿತರ ಕಡೆ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಅವರು ಕಳೆದೊಂದು ವರ್ಷದಿಂದ ಕೆ.ಆರ್.ಎಸ್.ಪಕ್ಷದ ಸಕ್ರಿಯ ಕಾರ್ಯಕರ್ತೆಯಾಗಿದ್ದಾರೆ.