ಸುಳ್ಯ ಸೀಮೆ ತೊಡಿಕಾನ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ, ಪೂರ್ವಭಾವಿ ಸಭೆ

0

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಕಾಲಾವಧಿ ಜಾತ್ರೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಮತ್ತು ಜಾತ್ರೋತ್ಸವದ ಪೂರ್ವಭಾವಿ ಸಭೆ ಮಾ. 24 ರಂದು ದೇವಸ್ಥಾನದ ಅಕ್ಷಯ ಸಭಾಂಗಣದಲ್ಲಿ ನಡೆಯಿತು.

ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಪಿ. ಬಿ. ದಿವಾಕರ ರೈ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಅವಿನ್ ರಂಗತ್ತಮಲೆ , ವ್ಯವಸ್ಥಾಪನಾ ಸಮಿತಿ ನಿಕಟ ಪೂರ್ವ ಅಧ್ಯಕ್ಷರಾದ ಕಿಶೋರ್ ಕುಮಾರ್ ಉಳುವಾರು, ಕೇಶವ ಕೊಳಲುಮೂಲೆ, ಪವಿತ್ರಪಾಣಿ ಕೃಷ್ಣ ಬೈಪಾಡಿತಾಯ ವೇದಿಕೆಯಲ್ಲಿದ್ದರು.
ಸಭೆಯಲ್ಲಿ ಪ್ರಮುಖರಾದ ಕೇಶವ ಅಡ್ತಲೆ, ಎಸ್. ಪಿ ಲೋಕನಾಥ, ಸಂತೋಷ್ ಕುತ್ತಮೊಟ್ಟೆ, ಹೂವಯ್ಯ ರೆಂಜರ್, ಕೆ. ಆರ್. ಗಂಗಾಧರ್, ಹೊನ್ನಪ್ಪ ಮಾಸ್ಟರ್, ಗಣಪತಿ ಭಟ್, ಭವಾನಿಶಂಕರ್ ಅಡ್ತಲೆ, ಗೋವರ್ಧನ್ ಬೊಳ್ಳೂರು, ವೆಂಕಟ್ರಮಣ ಪೆತ್ತಾಜೆ, ಸುಂದರ ಬಾಜಿನಡ್ಕ, ರವೀಂದ್ರಪೂಜಾರಿ , ಉಮಾಶಂಕರ ಅಡ್ಯಡ್ಕ, Gaon. ಕೆ. ಬಾಲಕೃಷ್ಣ, ಕಮಲಾಕ್ಷ ಪಡ್ಪು, ತಿಮ್ಮಯ್ಯ ಮೆತ್ತಡ್ಕ, ಗೋಪಾಲಕೃಷ್ಣ ಗುಂಡಿಗದ್ದೆ, ಚಂದ್ರಪ್ರಕಾಶ್ ಪಾನತ್ತಿಲ, ವೆಂಕಟೇಶ್ ಕುಂಟುಕಾಡು, ಜನಾರ್ಧನ ಬಾಳೆಕಜೆ, ಕದಿರೇಷನ್ ಪಿಲೈ, ಚಿದಾನಂದ ಕಾಡುಪಂಜ, ದಯಾನಂದ ನಾಗನಮೂಲೆ, ಮಾಲತಿ ಭೋಜಪ್ಪ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು. ದೇವಸ್ಥಾನದ ಮೆನೇಜರ್ ಆನಂದ ಕಲ್ಲಗದ್ದೆ ಕಾರ್ಯಕ್ರಮ ನಿರ್ವಹಿಸಿದರು.