ಪಂಜ ದೇವಾಲಯದಲ್ಲಿ “ರಂಗಸ್ಥಳ”ಚಲನ ಚಿತ್ರ ಮುಹೂರ್ತ

0

ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದಲ್ಲಿ ಮಾ.24 ರಂದು “ರಂಗಸ್ಥಳ”ಚಲನಚಿತ್ರ ಮುಹೂರ್ತ ಕಾರ್ಯಕ್ರಮವು ಜರುಗಿತು.

ದೇಗುಲದ ಪ್ರಧಾನ ಅರ್ಚಕ ರಾಮಚಂದ್ರ ಭಟ್
ದೇವರಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿ ಕ್ಯಾಮರಾ ಗೆ ಪ್ರಸಾದ ಹಚ್ಚಿದರು. ಚಲನಚಿತ್ರ ದ ನಿರ್ಮಾಪಕ ರೇವಣ್ಣ ಮಂಡ್ಯ ರವರು ಮುಹೂರ್ತ ಕಾರ್ಯಕ್ರಮವನ್ನು ನಡೆಸಿಕೊಟ್ಟರು.


ಸಭಾ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಚಲನಚಿತ್ರದ ನಿರ್ಮಾಪಕ ರೇವಣ್ಣ ಮಂಡ್ಯ ರವರು ವಹಿಸಿದ್ದರು.
ವೇದಿಕೆಯಲ್ಲಿ ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ, ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರ್, ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಉದಯಕುಮಾರ್ ಬೆಟ್ಟ, ಡಾ. ಸುಂದರ ಕೆನಾಜೆ, ಸುಬ್ರಾಯ ಭಟ್ ಓಣಿಯಡ್ಕ, ಪ್ರೀತಮ್ ರೈ ಬೆಳ್ಳಾರೆ, ಬೆಟ್ಟ ರಮೇಶ್ ಭಟ್, ಮಧುರಾಜ್ ಕುಂಬ್ರ, ಚಲನಚಿತ್ರದ ನಿರ್ದೇಶಕರಾದ ಈಶ್ವರ ನಿತಿನ್ ಭಾರದ್ವಾಜ್, ನಾಯಕ ನಟರಾದ ವಿಲೋಕ್ ರಾಜ್, ಛಾಯಾಗ್ರಾಹಕ ಇನೋಷ್ ಒಲಿವೇರ, ಕಾರ್ಯದರ್ಶಿ ಸಂತೋಷ್ ಯಾದವ್ , ವ್ಯವಸ್ಥಾಪನ ಸಮಿತಿ ಸದಸ್ಯರಾದ ಸಂತೋಷ್ ಕುಮಾರ್ ರೈ ಬಳ್ಪ, ಸತ್ಯ ನಾರಾಯಣ ಭಟ್ ಕಾಯಂಬಾಡಿ, ಧರ್ಮಣ್ಣನಾಯ್ಕ ಗರಡಿ ಹಾಗೂ ಚಲನಚಿತ್ರ ತಂಡದವರು ಉಪಸ್ಥಿತರಿದ್ದರು ಸಭೆಯಲ್ಲಿ ಚಲನಚಿತ್ರದ ನಿರ್ಮಾಪಕ ರೇವಣ್ಣ ರವರನ್ನು, ಚಲನಚಿತ್ರ ತಂಡದವರನ್ನು ದೇಗುಲದ ವತಿಯಿಂದ ಸನ್ಮಾನಿಸಲಾಯಿತು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರಮೇಶ್ ಬೆಟ್ಟ ಸ್ವಾಗತಿಸಿದರು. ನಾಯಕ ನಟ ವಿಲೋಕ್ ರಾಜ ವಂದಿಸಿದರು.