ಮಸ್ಕತ್ ಪ್ರವಾಸ ಕೈಗೊಳ್ಳಲಿರುವ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ.ಶಹೀದ್ ಗೆ ಬೀಳ್ಕೊಡುಗೆ

0

ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮಸ್ಕತ್ ಪ್ರವಾಸ ಕೈಗೊಳ್ಳುತ್ತಿರುವ ಅರಂತೋಡು ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಧ್ಯಕ್ಷ ಹಾಗೂ ಕರ್ನಾಟಕ ಕೆ.ಪಿ.ಸಿ.ಸಿ. ಮುಖ್ಯ ವಕ್ತಾರರಾದ ಟಿ. ಎಂ. ಶಹೀದ್ ತೆಕ್ಕಿಲ್ ಅವರನ್ನು ಸನ್ಮಾನಿಸಿ, ಬೀಳ್ಕೊಡಲಾಯಿತು.

ಬೆಳ್ಳಾರೆ ಮಸೀದಿಯ ಅಧ್ಯಕ್ಷ ಮಂಗಳ ಅಬೂಬಕ್ಕರ್ ಹಾಜಿ ಅವರು ಶಾಲು ಹೊದಿಸಿ, ಗಾಂಧಿನಗರ ಅಲ್ಬಿರ್ ನಿವಾಸದಲ್ಲಿ ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹಮೀದ್ ಕುತ್ತಮಟ್ಟೆ, ನಗರ ಪಂಚಾಯತ್ ಸದಸ್ಯ ಸಿದ್ದೀಕ್ ಕೊಕೋ, ಹನೀಫ್ ಬೀಜಕೊಚ್ಚಿ,ಶಮೀಯುಲ್ಲ ಮೊದಲಾದವರು ಉಪಸ್ಥಿತರಿದ್ದರು.