p>

ಚುನಾವಣಾ ಸಂದರ್ಭದಲ್ಲಿ ಕೋವಿ ಡಿಪಾಸಿಟ್ ಗೆ ವಿನಾಯಿತಿ ನೀಡುವಂತೆ ಚುನಾವಣಾ ಆಯೋಗಕ್ಕೆ ಬಿಜೆಪಿ ಮನವಿ

0

ಚುನಾವಣಾ ಸಂದರ್ಭದಲ್ಲಿ ಕೋವಿ ಡಿಪಾಸಿಟ್ ಗೆ ವಿನಾಯಿತಿ ನೀಡುವಂತೆ ಚುನಾವಣಾ ಆಯೋಗಕ್ಕೆ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಲಳಂಬೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸುಳ್ಯ ತಾಲೂಕಿನ ಹೆಚ್ಚಿನ ಪ್ರದೇಶ ಗುಡ್ಡಗಾಡು ಮತ್ತು ತೋಟ, ಕೃಷಿಯನ್ನು ಅವಲಂಬಿಸಿರುವ ಜನಗಳೇ ಹೆಚ್ಚಾಗಿದ್ದು ,ಅಪರಾಧ ಚಟವಟಿಕೆ ಹೊರತು ಪಡಿಸಿ ಉಳಿದವರ ಕೋವಿ ಡೇಪಸಿಟ್ ಬಗ್ಗೆ ವಿನಾಯಿತಿ ನೀಡುವಂತೆ ಮತ್ತು ಈ ಚುನಾವಣೆ ಪ್ರಕ್ರಿಯೆ ತುಂಬಾ ದಿನಗಳಿರುವ ಕಾರಣ ರೈತರ ಹಿತ ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ವಿನಾಯಿತಿ ನೀಡುವಂತೆ ಮಂಡಲ ಬಿಜೆಪಿ ಅಧ್ಯಕ್ಷ ವೆಂಕಟ್ ವಳಲಂಬೆ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.