ಪೈಚಾರು ಬದ್ರಿಯಾ ಜುಮಾ ಮಸೀದಿಗೆ ನಝೀರ್ ಶಾಂತಿನಗರ ರವರಿಂದ ನೀರಿನ ಪೈಪ್ ಕೊಡುಗೆ

0

ಪೈಚಾರು ಬದ್ರಿಯಾ ಜುಮಾ ಮಸೀದಿಗೆ ಶಾಂತಿನಗರ ಸರ್ಕಾರಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ನಝೀರ್ ಶಾಂತಿನಗರ ನೀರಿನ ಪೈಪ್ ಕೊಡುಗೆಯಾಗಿ ನೀಡಿದ್ದಾರೆ.

ಮಾರ್ಚ್ 28ರಂದು ಮಸೀದಿಯಲ್ಲಿ ನಡೆದ ಬೃಹತ್ ಇಫ್ತಾರ್ ಕೂಟದ ಸಭಾ ವೇದಿಕೆಯಲ್ಲಿ ಮಸೀದಿ ಆಡಳಿತ ಕಮಿಟಿಯ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಜಮಾಅತ್ ಕಮಿಟಿಯ ಉಪಾಧ್ಯಕ್ಷ ರಜಾಕ್ ಆರ್ತಾಜೆ,ಕಾರುಣ್ಯ ಚಾರಿಟೇಬಲ್ ಅಧ್ಯಕ್ಷ ಬಶೀರ್ ಆರ್ ಬಿ, ಜಮಾಅತ್ ಕಾರ್ಯದರ್ಶಿ ಹನೀಫ್ ಪಿ ಕೆ,ಉದ್ಯಮಿ ಶಾಫಿ ಪ್ರಗತಿ ಮೊದಲಾದವರು ಉಪಸ್ಥಿತರಿದ್ದರು.