ಜಾಲ್ಸೂರಿನ ವ್ಯಕ್ತಿ ಶೇಖಮಲೆಯಲ್ಲಿ ಹೃದಯಾಘಾತದಿಂದ ನಿಧನ

0

ಜಾಲ್ಸೂರಿನ ವ್ಯಕ್ತಿಯೋರ್ವರು ಪುತ್ತೂರು ತಾಲೂಕಿನ ಕುಂಬ್ರ ಸಮೀಪದ ಶೇಖಮಲೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದ ಘಟನೆ ಮಾ.29ರಂದು ರಾತ್ರಿ ಸಂಭವಿಸಿದೆ.

ಜಾಲ್ಸೂರು ಗ್ರಾಮದ ಕುಂದ್ರುಕೋಡಿಯಲ್ಲಿ ನೆಲೆಸಿರುವ ಕೃಷ್ಣಪ್ಪ ಮೇಸ್ತ್ರಿ ಅವರು ಕಳೆದ ಹಲವಾರು ವರ್ಷಗಳಿಂದ ದೈವದ ನೇಮೋತ್ಸವಕ್ಕೆ ವಾದ್ಯ ಊದುವ ವೃತ್ತಿಯನ್ನು ನಡೆಸುತ್ತಿದ್ದು, ಮಾ.29ರಂದು ರಾತ್ರಿ ಪುತ್ತೂರು ತಾಲೂಕಿನ ಶೇಖಮಲೆ ಎಂಬಲ್ಲಿ ಗರಡಿ ನೇಮೋತ್ಸವದ ಕಾರ್ಯಕ್ರಮದಲ್ಲಿ ವಾದ್ಯ ಊದುತ್ತಿರುವ ವೇಳೆ ಹೃದಯಾಘಾತ ಸಂಭವಿಸಿ, ಕುಸಿದು ಬಿದ್ದರೆನ್ನಲಾಗಿದೆ. ತಕ್ಷಣ ಅಲ್ಲಿದ್ದವರು ಅವರನ್ನು ವಾಹನದ ಮೂಲಕ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರಾದರೂ, ಆಸ್ಪತ್ರೆ ತಲುಪುವ ವೇಳೆಗೆ ಅವರ ಪ್ರಾಣಪಕ್ಷಿ ಹಾರಿಹೋಗಿತ್ತೆನ್ನಲಾಗಿದೆ.

ಕೃಷ್ಣಪ್ಪ ಮೇಸ್ತ್ರಿ ಅವರಿಗೆ 56 ವರ್ಷ ವಯಸ್ಸಾಗಿತ್ತು. ಮೃತರಿಗೆ ಇಬ್ಬರು ಪತ್ನಿಯರಿದ್ದು, ದೇವಕಿ ಹಾಗೂ ಅಂಗನವಾಡಿ ಕಾರ್ಯಕರ್ತೆ ಗಿರಿಜ, ಪುತ್ರರಾದ ಶಶಿಕುಮಾರ್, ವಿನೋದ್ ಕುಮಾರ್, ಶಾಲಿನಿ, ವಿಸ್ಮಿತ, ತನುಷ, ಸಹೋದರ ಮುತ್ತಪ್ಪ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.