ಪರಿವಾರ ಕುಟುಂಬದ ತರವಾಡು ದೈವಸ್ಥಾನದಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಕುಲ್ಚಾಟ ಹಾಗೂ ಉಪ ದೈವಗಳ ಕೋಲ

0

ಆಲೆಟ್ಟಿ ಗ್ರಾಮದ ಪರಿವಾರ ಉಳಿಯ ತರವಾಡು ದೈವಸ್ಥಾನದಲ್ಲಿ ಶ್ರೀ ವೆಂಕಟರಮಣ ದೇವರ ಹರಿಸೇವೆ,ಶ್ರೀ ಮಹಾ ವಿಷ್ಣುಮೂರ್ತಿ ಹಾಗೂ ಶ್ರೀ ಧರ್ಮ ದೈವ ಮತ್ತು ಉಪದೈವಗಳ ಧರ್ಮನಡಾವಳಿಗೆ ಕೂಡಿ ಶ್ರೀ ವಿಷ್ಣುಮೂರ್ತಿ ದೈವದ ಕುಲ್ಚಾಟ ನಡೆಯಿತು.

ಮಾ.30 ರಂದು ಬೆಳಗ್ಗೆ ಶ್ರೀ ವೆಂಕಟರಮಣ ದೇವರ ಹರಿಸೇವೆಯಾಗಿ ಸಂಜೆ ಅರಂಬೂರು ಕುದ್ಕುಳಿ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಿಂದ ಭಂಡಾರ ಆಗಮಿಸಿದ ನಂತರ ರಾತ್ರಿ ತೊಡಂಞಲ್ ಬಳಿಕ ಶ್ರೀ ವಿಷ್ಣುಮೂರ್ತಿ ದೈವದ ಕುಲ್ಚಾಟವಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು. ಗುರುಕಾರ್ನೋರು, ಸತ್ಯದೇವತೆ, ಪಿಲಿಭೂತ, ವರ್ಣಾರ ಪಂಜುರ್ಲಿ, ಕುಪ್ಪೆ ಪಂಜುರ್ಲಿ ದೈವಗಳ ಕೋಲವು ನಡೆಯಿತು.