ಶ್ರೀಮತಿ ನಾರಾಯಣಿ ಕಜೆಯವರ ಶ್ರದ್ದಾಂಜಲಿ ಕಾರ್ಯಕ್ರಮ

0


ಮಾ. ೭ರಂದು ನಿಧನರಾದ ದಿ. ಕಜೆ ಗುಡ್ಡಪ್ಪ ಗೌಡರ ಪತ್ನಿ, ನಿವೃತ್ತ ಶಿಕ್ಷಕಿ ಶ್ರೀಮತಿ ನಾರಾಯಣಿ ಕಜೆಯವರು ಶ್ರದ್ದಾಂಜಲಿ ಕಾರ್ಯಕ್ರಮವು ಸುಳ್ಯದ ಅಂಬಟೆಡ್ಕದಲ್ಲಿರುವ ಗಿರಿದರ್ಶಿನಿ ಸಭಾಭವನದಲ್ಲಿ ಮಾ. ೩೧ರಂದು ನಡೆಯಿತು.
ಈ ಸಂದರ್ಭದಲ್ಲಿ ಮೃತರ ಪುತ್ರರಾದ ಶಶಿಧರ ಕಜೆ, ಶಿವಪ್ರಸಾದ ಜಿ., ಪುತ್ರಿ ಶ್ರೀಮತಿ ಸಂಧ್ಯಾ ಕಿಶೋರ್ ನೆಲ್ಲಿಕಟ್ಟೆ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು, ಮೃತರ ಬಂಧುಗಳು ಹಾಗೂ ಊರವರು ಉಪಸ್ಥಿತರಿದ್ದು, ಮೃತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.