ಸುಬ್ರಹ್ಮಣ್ಯ ಬಿ.ಎಮ್.ಎಸ್ ಆಟೋ ಚಾಲಕರ ಸಂಘದ ಮಹಾಸಭೆ

0

ಸುಳ್ಯ ತಾಲೂಕು ಆಟೋ ಚಾಲಕರ ಸಂಘ, ರಿ ಬಿ.ಎಮ್.ಎಸ್ ಸಂಯೋಜಿತ ಸುಬ್ರಹ್ಮಣ್ಯ ಘಟಕ ಇದರ ವಾರ್ಷಿಕ ಮಹಾಸಭೆ ಎ. 1ರಂದು ಸುಬ್ರಹ್ಮಣ್ಯದ ವನದುರ್ಗ ದೇವಸ್ಥಾನದಲ್ಲಿ ಸುಬ್ರಹ್ಮಣ್ಯ ಘಟಕದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಸುಳ್ಯ ತಾಲೂಕು ಆಟೋ ಚಾಲಕರ ಸಂಘದ ಅಧ್ಯಕ್ಷರಾದ ರಾಧಕೃಷ್ಣ ಬೈತಡ್ಕ ಸಂಘದ ಚಟುವಟಿಕೆ, ಜವಾಬ್ದಾರಿ, ನಿಯಮಗಳ ಬಗ್ಗೆ ಹೇಳಿ ಸಂಘವು ಬೆಳೆದು ಬಂದ ರೀತಿ ಆಗಿನ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿದರು. ಸುಬ್ರಹ್ಮಣ್ಯ ಘಟಕದ ವಾರ್ಷಿಕ ವರದಿ, ಲೆಕ್ಕಪತ್ರ ಮಂಡಿಸಿ ಅನುಮೋದನೆ ಪಡೆಯಲಾಯಿತು.

2024_ 25 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಅಯ್ಕೆ ಮಾಡಲಾಯಿತು. ಅಧ್ಯಕರಾಗಿ ದಿನೇಶ್ ಶಿರಾಡಿ, ಕಾರ್ಯದರ್ಶಿಯಾಗಿ ಜೀವನ್ ಕುಜುಂಬಾರ್ ಮರು ಆಯ್ಕೆ ಗೊಂಡರು. ಗೌರವಾಧ್ಯಕ್ಷರಾಗಿ ಗಿರಿಧರ ಹೊಸೊಳಿಕೆ, ಸಂಘಟನಾ ಕಾರ್ಯದರ್ಶಿಯಾಗಿ ದಿವಾಕರ ಪರ್ವತಮುಖಿ ಮರು ಆಯ್ಕೆ ಗೊಂಡರು. ಜತೆ ಕಾರ್ಯದರ್ಶಿಯಾಗಿ ವಿಜೇತ್ ಮತ್ತು ಕೋಶಧಿಕಾರಿಯಾಗಿ ಜಯಪ್ರಕಾಶ್ ಆಯ್ಕೆಯಾದರು.