ಅರಂತೋಡು :ಕೆಲಸ ಕೇಳಿಕೊಂಡು ಬಂದು ಮೊಬೈಲ್‌ ಫೋನ್, ಬೈಕ್‌ ಕಳ್ಳತನ, ಪರಾರಿ

0

ಸುಳ್ಯ ಠಾಣೆಯಲ್ಲಿ ದೂರು

ಕೆಲಸ ಕೇಳಿಕೊಂಡು ಬಂದವ ಮೊಬೈಲ್‌ ಫೋನ್ ಮತ್ತು ಬೈಕ್‌ ಕಳವು ಮಾಡಿ ಪರಾರಿಯಾಗಿರುವ ಘಟನೆ ಸುಳ್ಯ ಅರಂತೋಡುನಿಂದ ವಾರದಿಯಾಗಿದೆ.

ಬೆಳ್ತಂಗಡಿ ಮೂಲದ ರಿಯಾಜ್‌ ಅವರು ಅರಂತೋಡಿನ ಹೊಟೇಲ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದು ಅವರಲ್ಲಿಗೆ ಅವರ ಪರಿಚಯದ ಹರ್ಷಿಕೇಶ್‌ ಎಂಬಾತ ಕೆಲಸ ಕೇಳಿಕೊಂಡು ಬಂದಿದ್ದಾನೆ .ಆತನನ್ನು ರಿಯಾಜ್‌ ಹೊಟೇಲ್‌ಗೆ ಕರೆದುಕೊಂಡು ಹೋಗಿದ್ದು ಮಧ್ಯಾಹ್ನ ರಿಯಾಜ್‌ ವಿಶ್ರಾಂತಿ ಪಡೆಯಲು ಮಲಗಿದ್ದು ಸುಮಾರು 2 ಗಂಟೆಯ ಬಳಿಕ ಎದ್ದು ನೋಡಿದಾಗ ಹರ್ಷಿಕೇಶ್‌ ರೂಂನಲ್ಲಿ ಕಾಣಿಸಲಿಲ್ಲ. ಜೊತೆಗೆ ರಿಯಾಜ್‌ ಅವರಲ್ಲಿದ್ದ ಮೊಬೈಲ್‌(14 ಸಾವಿರ ರೂ. ಮೌಲ್ಯ) ಹಾಗೂ ಮೋಟಾರ್‌ ಸೈಕಲ್‌ (60 ಸಾವಿರ ರೂ. ಮೌಲ್ಯ) ಕಳವು ಮಾಡಿಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ.

ಈ ಬಗ್ಗೆ ಸುಳ್ಯ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.