ಮಂಡೆಕೋಲು ಬ್ರಹ್ಮಕಲಶ : ಮಾತೃ ಸಮಿತಿಯಿಂದ ಸಮವಸ್ತ್ರ ವಿತರಣೆ

0

ಮಂಡೆಕೋಲು ಶ್ರೀ ಮಹಾವಿಷ್ಣು ದೇವರ ಬ್ರಹ್ಮಕಲಶ ಪ್ರಯುಕ್ತ ಮಾತೃಸಮಿತಿ ವತಿಯಿಂದ ಸಮವಸ್ತ್ರ ವಿತರಣೆ ನಡೆಯಿತು.

ಸಮವಸ್ತ್ರ ಇಟ್ಟು ದೇವರಿಗೆ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಮಾತೃ ಸಮಿತಿ ಸಂಚಾಲಕಿ ಶ್ರೀಮತಿ ವಿನುತಾ ಪಾತಿಕಲ್ಲು ಸಮವಸ್ತ್ರ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಮೂರ್ತಿ ಹೆಬ್ಬಾರ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಉಗ್ರಾಣಿಮನೆ, ಪ್ರಧಾನ ಕಾರ್ಯದರ್ಶಿ ಸುರೇಶ್ ಕಣೆಮರಡ್ಕ, ಆರ್ಥಿಕ ಸಮಿತಿ ಸಂಚಾಲಕರಾದ ಉದಯ ಆಚಾರ್, ಬಾಲಚಂದ್ರ ದೇವರಗುಂಡ, ದಾಮೋದರ ಪಾತಿಕಲ್ಲು, ಲಕ್ಷ್ಮಣ ಉಗ್ರಾಣಿಮನೆ, ಚಂದ್ರಶೇಖರ ಕಲ್ಲಡ್ಕ, ಉದಯಕುಮಾರ್ ಟಿ, ನಾರಾಯಣ ಗೌಡ, ಹಾಗೂ ಮಾತೃಸಮಿತಿ ಯವರಾದ ಪುಷ್ಪಾವತಿ ಟೀಚರ್, ಜಾನಕಿ ಕಣೆಮರಡ್ಕ, ತುಳಸಿನಿ ದೇವರಗುಂಡ, ವಸಂತಿ‌ ಉಗ್ರಾಣಿಮನೆ, ಸರೋಜಿನಿ ಮಾವಂಜಿ, ಮೋಹಿನಿ ಮಂಡೆಕೋಲು, ಮಮತಾ, ಯೋಗೀತಾ ಮೊದಲಾದವರಿದ್ದರು.