ಮಂಗಳೂರಿನಲ್ಲಿ “ತುಳುನಾಡ ಅಮರ ಸುಳ್ಯ ಸಮರ -1837” ಸಂಸ್ಮರಣೆ ಮತ್ತು ವಿಜಯ ದಿನಾಚರಣೆ

0

ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸ್ಥಾಪನಾ ಸಮಿತಿ ಮಂಗಳೂರು ಹಾಗೂ ತುಳುನಾಡ ರಕ್ಷಣಾ ವೇದಿಕೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ತುಳುನಾಡಿನ ವೀರ ರೈತರಿಂದ ನಡೆದ ಸ್ವಾತಂತ್ರ್ಯ ಸಂಗ್ರಾಮ “ತುಳುನಾಡ ಅಮರ ಸುಳ್ಯ ಸಮರ -1837” ಸಂಸ್ಮರಣೆ ಮತ್ತು ವಿಜಯ ದಿನಾಚರಣೆ ಕಾರ್ಯಕ್ರಮ ಎ. 5ರಂದು ಮಂಗಳೂರಿನ ಬಾವುಟಗುಡ್ಡೆಯಲ್ಲಿ ನಡೆಯಿತು.

ಆದಿಚುಂಚನಗಿರಿ ಕಾವೂರು ಶಾಖಾ ಮಠದ ಡಾ. ಧರ್ಮಪಾಲನಾಥ ಸ್ವಾಮೀಜಿಯವರು ಕೆದಂಬಾಡಿ ರಾಮಯ್ಯ ಗೌಡ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸುವುದರ ಮೂಲಕ ಗೌರವ ವಂದನೆ ಸಲ್ಲಿಸಿದರು.

ಪ್ರಮುಖರಾದ ಡಿ.ಬಿ.ಬಾಲಕೃಷ್ಣ, ಕಿರಣ್ ಬುಡ್ಲೆಗುತ್ತು, ಯೋಗೀಶ್ ಶೆಟ್ಟಿ ಜೆಪ್ಪು, ಭಾಸ್ಕರ ದೇವಸ್ಯ,
ರಕ್ಷಿತ್ ಪುತ್ತಿಲ, ಕಿರಣ್ ಹೊಸೋಳಿಕೆ, ಮಹೇಶ್ ನಡುತೋಟ ,ಆನಂದ ಪಿ.ಎಚ್ ಸುನಿಲ್ ಕೇರ್ನಡ್ಕ, ಶಾಂತಪ್ಪ ಯು, ಸುರೇಶ್ ಬೈಲು, ಶಿವರಾಮ ಗೌಡ ನಿನ್ನಿಕಲ್ಲು, ಮಹೇಶ್ ಮೊಂಟಡ್ಕ, ಗಣೇಶ್ ಕಳಾಯಿ, ಪುರುಷೋತ್ತಮ ದೇವಸ್ಯ, ಸುಂದರ.ಬಿ, ಕಲಾವತಿ, ಜಯಶ್ರೀ, ಡಾ.ಅರುಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಚಿತ್ರಕಲಾ ಸ್ಪರ್ಧೆ ಮತ್ತು ರಸಪ್ರಶ್ನೆ ಸ್ಪರ್ಧೆ ನಡೆಯಿತು.