ಡಾl ಭವ್ಯ ಶೇಖರ್ ರವರಿಗೆ ದುಬೈ ಇಂಡಿಯಾ ಇಂಟರ್ ನ್ಯಾಷನಲ್ ಅವಾರ್ಡ್ ಪ್ರದಾನ

0

ನಿನ್ನೆ ಏಷ್ಯಾನೆಟ್ ಸುವರ್ಣ ನ್ಯೂಸ್ ಚಾನೆಲ್ ನಲ್ಲಿ ಪ್ರಸಾರ

ಕನ್ನಡ ಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ವೇದಿಕೆ ಕೊಡಮಾಡಲ್ಪಡುವ ದುಬೈ ಇಂಡಿಯಾ ಇಂಟರ್ ನ್ಯಾಷನಲ್ ಅವಾರ್ಡ್ – 2024 ಕ್ಕೆ ಡಾl ಭವ್ಯ ಶೇಖರ್ ದಮ್ಮೂರ್ ಆಯ್ಕೆಯಾಗಿ ಮಾ.28ರಂದು ದುಬೈನಲ್ಲಿ ಪ್ರಶಸ್ತಿ ಸ್ವೀಕರಿಸಿದ ವರದಿ ನಿನ್ನೆ(ಎ.7)ಸಂಜೆ ಏಷ್ಯಾ ನೆಟ್ ಸುವರ್ಣ ಚಾನೆಲ್ ನಲ್ಲಿ ಪ್ರಸಾರವಾಗಿತ್ತು. ಸಮಾರಂಭದಲ್ಲಿ ಬಳ್ಳಾರಿಯ ಎಸ್.ಬಿ.ಗ್ರೂಪ್ ಆಫ್ ಇನ್ ಸ್ಟಿಟ್ಯೂಷನ್ ನ ಚೆರ್ಮೇನ್ ಡಾl ಭವ್ಯ ಶೇಖರ್ ಸೇರಿದಂತೆ 23 ಮಂದಿ ವಿವಿಧ ಕ್ಷೇತ್ರದ ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.


ಸಮಾರಂಭದಲ್ಲಿ ಸಾಧಕರ ಸಾಧನೆ ಮತ್ತು ಸಂಸ್ಥೆಯ ಚಿತ್ರಣವನ್ನು ನೋಡುಗರಿಗೆ ಪರಿಚಯಿಸಲಾಯಿತು. ಭವ್ಯರವರು ಸನ್ಮಾನ ಸ್ವೀಕರಿಸಿ ಅನುಭವಗಳನ್ನು ಹಂಚಿಕೊಂಡರು.
ಡಾl ಭವ್ಯರವರು ಮುಂಡೋಡಿ ಮನೆತನದ ದಿ.ಸದಾನಂದ ಗೌಡ ಮತ್ತು ಶ್ರೀಮತಿ ರವಿಕಲಾ ದಂಪತಿಯ ಪುತ್ರಿ. ಬಳ್ಳಾರಿಯ ರಾಜಕೀಯ ಮುಖಂಡ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ದಮ್ಮೂರ್ ಶೇಖರ್ ರವರ ಪತ್ನಿ.