ಹಾಲೆಮಜಲು :ಚಿಣ್ಣರ ಚಿತ್ತಾರ ಮಕ್ಕಳ ಬೇಸಿಗೆ ಶಿಬಿರ ಉದ್ಘಾಟನೆ

0


ಜೆಸಿಐ ಪಂಜ ಪಂಚಶ್ರೀ ಪ್ರೊಡಕ್ಷನ್ ಇನ್ಸ್ಟಿಟ್ಯೂಟ್ ಆಫ್ ಡ್ಯಾನ್ಸ್ ಸುಳ್ಯ ಆದರ್ಶ ಯೂತ್ ಕ್ಲಬ್ ಹಾಲೆಮಜಲು ಇವುಗಳ ಸಂಯುಕ್ತ ಆಶ್ರಯದಲ್ಲಿ ಚಿಣ್ಣರ ಚಿತ್ತಾರ ಮಕ್ಕಳ ಬೇಸಿಗೆ ಶಿಬಿರ ೨೦೨೪ ಇದರ ಉದ್ಘಾಟನಾ ಕಾರ್ಯಕ್ರಮ . ೧೧ರಂದು ಹಾಲೆಮಜಲಿನ ಶ್ರೀ ವೆಂಕಟೇಶ್ವರ ಸಭಾಭವನದಲ್ಲಿ ನಡೆಯಿತು.


ಕಾರ್ಯಕ್ರಮದ ಉದ್ಘಾಟನೆಯನ್ನು ಸರಕಾರಿ ಪದವಿ ಪೂರ್ವ ಕಾಲೇಜು ಪಂಜ ಇಲ್ಲಿನ ಪ್ರಾಂಶುಪಾಲರಾದ ವೆಂಕಪ್ಪ ಗೌಡ ಕೆನಾಜೆ ದೀಪ ಬೆಳಗಿಸಿ ಶುಭ ಹಾರೈಸಿದರು. ಸಭಾಧ್ಯಕ್ಷತೆಯನ್ನು ಪಂಜ ಪಂಚಶ್ರೀ ಜೆ ಸಿ ಐಅಧ್ಯಕ್ಷರಾದ ಜೇಸಿ ಜೀವನ್ ಮಲ್ಕಜೆ. ವಹಿಸಿದ್ದರು. ವೇದಿಕೆಯಲ್ಲಿ ಝೀ ಕನ್ನಡ ಡ್ರಾಮಾ ಜೂನಿಯರ್ ಸೀಸನ್ ಸ್ಪರ್ಧಿ ವೇದಿಕ್ ಕೌಶಲ್, ಆದರ್ಶ ಯೂತ್ ಕ್ಲಬ್ ಇದರ ಅಧ್ಯಕ್ಷ ಸತೀಶ್ ಬಂಬುಳಿ, ಫ್ಯೂಶನ್ ಡ್ಯಾನ್ಸ್ ಸುಳ್ಯ ಇಲ್ಲಿನ ರಂಗಭೂಮಿ ಕಲಾವಿದ ರಾಜ ಮುಕೇಶ್, ಟ್ಯೂಷನ್ ಇನ್ಸ್ಟಿಟ್ಯೂಟ್ ಆಫ್ ಡ್ಯಾನ್ಸ್ ಸುಳ್ಯ ಇಲ್ಲಿನ ವಸಂತ ಆಚಾರ್ಯ ಕಾಯರ್ತೋಡಿ. ಭಜನೆ ತರಬೇತುದಾರ ಸ್ವಾತಿ ಮಾಧವ ಬೆಟ್ಟಂಪಾಡಿ, ಕಾರ್ಯಕ್ರಮ ಸಂಯೋಜಕರಾದ ದುರ್ಗದಾಸ್ ಕಡ್ಲಾರು ಉಪಸ್ಥಿತರಿದ್ದರು ಶಿಬಿರದಲ್ಲಿ ವಿವಿಧ ಕಡೆಯ ಮಕ್ಕಳು, ಪೋಷಕರು, ಪಂಜ ಪಂಚಶ್ರೀ ಜೇಸಿಐ ಇದರ ನಿಕಟ ಪೂರ್ವಾಧ್ಯಕ್ಷರುಗಳು, ಪದಾಧಿಕಾರಿಗಳು, ಆದರ್ಶ ಯೂತ್ ಕ್ಲಬ್‌ನ ಪದಾಧಿಕಾರಿಗಳು ಸೇರಿದಂತೆ ಅನೇಕ ಮಂದಿ ಉಪಸ್ಥಿತರಿದ್ದರು. (ಚಿತ್ರ, ವರದಿ : ದಿನೇಶ್ ಹಾಲೆಮಜಲು)