ಸವಣೂರು : ಕತ್ತಿಯಿಂದ ಕಡಿದು ಹಲ್ಲೆ – ಪ್ರಕರಣ ದಾಖಲು

0

ಸವಣೂರು ಗ್ರಾಮದ ಮಲೆತ್ತಾರು ಎಂಬಲ್ಲಿ ಜಾಗದ ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿಯೋರ್ವರು ಕತ್ತಿಯಿಂದ ಕಡಿದು ಗಾಯಗೊಳಿಸಿದ ಘಟನೆ ನಡೆದಿದೆ.
ಕೃಷ್ಣಪ್ಪ ಗೌಡ ಎಂಬವರಿಗೆ ದಯಾನಂದ ಎಂಬವರು ಕತ್ತಿಯಿಂದ ಕಡಿದು ಗಾಯಗೊಳಿಸಿದ್ದು ಗಾಯಗೊಂಡ ಕೃಷ್ಣಪ್ಪ ಗೌಡರವರು ಮಂಗಳೂರಿನ ಇಂಡಿಯನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದು ಬಂದಿದೆ.
ಕೃಷ್ಣಪ್ಪ ಗೌಡರವರು ತನ್ನ ಮನೆಗೆ ಕೆಲಸಕ್ಕೆ ಬಂದಿದ್ದ ಕೂಲಿ ಕೆಲಸದವರನ್ನು ಓಮ್ನಿ ಕಾರಿನಲ್ಲಿ ಸುಳ್ಯಕ್ಕೆ ಬಿಟ್ಟು ಬಂದು ತನ್ನ ಅಕ್ಕನ ಮನೆಯಲ್ಲಿ ಮಾತನಾಡಿ ಮನೆಗೆ ನಡೆದುಕೊಂಡು ಬರುತ್ತಿರುವಾಗ ರಾತ್ರಿ ದಯಾನಂದ ಎಂಬವರು ಅವಿತು ಕುಳಿತು ಕತ್ತಿಯಿಂದ ಕಡಿದಿರುವುದಾಗಿ ಕೃಷ್ಣಪ್ಪ ಗೌಡರವರ ಪುತ್ರ ಪ್ರಕಾಶ ಎಂಬವರು ಪೊಲೀಸ್ ದೂರು ನೀಡಿದ್ದು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲವು ಸಮಯದಿಂದ ಇವರಿಗೆ ಜಾಗದ ವಿಚಾರದಲ್ಲಿ ತಕರಾರು ನಡೆಯುತ್ತಿತ್ತೆನ್ನಲಾಗಿದೆ.