ಮಂಗಳೂರಿನಲ್ಲಿ ಮೋದಿ ಕಮಾಲ್ ರೋಡ್ ಶೋ ಗೆ ಹರಿದು ಬಂದ ಜನಸಾಗರ

0

ಕಡಲ ನಗರಿ ಮಂಗಳೂರು ಅಕ್ಷರಶಃ ಇಂದು ಕೇಸರಿ ಪಡೆಯಿಂದ ತುಂಬಿ ಹೋಗಿತ್ತು. ನರೇಂದ್ರ ಮೋದಿ ರೋಡ್ ಶೋ ನೋಡಲು 5 ಗಂಟೆಯಿಂದಲೇ ಜನಸಾಗರವೇ ಬಂದಿದ್ದು, ಬ್ರಹ್ಮರ್ಷಿ ನಾರಾಯಣ ಗುರು ಪ್ರತಿಮೆಗೆ ಹಾರಾರ್ಪಣೆ ಮಾಡಿ ಮೊದಲಿಗೆ ಮೋದಿ ಗೌರವ ಸಲ್ಲಿಸಿದರು.ಕೇಸರಿ ಪೇಟ,ಮೋದಿ ಹೋಲ್ಡಿಂಗ್ ಹಿಡಿದು, ಹುಲಿ ವೇಷ ಕುಣಿತ ಮೂಲಕ ಮೋದಿ ಗೆ ಭರ್ಜರಿ ಜೈಕಾರ,ಹೂ ಮಳೆಯ ಸ್ವಾಗತವನ್ನು ನೀಡಲಾಯಿತು.ತೆರೆದ ವಾಹನದಲ್ಲಿ ಅಭ್ಯರ್ಥಿಗಳಾದ ಬ್ರಿಜೇಶ್ ಚೌಟ, ಕೋಟಾ ಶ್ರೀನಿವಾಸ ಪೂಜಾರಿ ಜೊತೆಗಿದ್ದರು. ಇಕ್ಕೆಲಗಳಲ್ಲಿ ನೆರೆದ ಸಾವಿರಾರು ಜನಸ್ತೋಮ ಹೂ ಮಳೆಗೈದು ಕಣ್ಣುತುಂಬಿಕೊಂಡರು.