ಬಳ್ಪ ಕುಮನಪಾಳ್ಯ‌ ದೈವಸ್ಥಾನದಲ್ಲಿ ವಾರ್ಷಿಕ ಸಭೆ, ಅಧ್ಯಕ್ಷರಾಗಿ ಪದ್ಮನಾಭ ರೈ, ಕಾರ್ಯದರ್ಶಿಯಾಗಿ ಶಿವಪ್ರಸಾದ್ ಕೊಠಾರಿ

0

ಬಳ್ಪ ಗ್ರಾಮದ ಗ್ರಾಮ ದೈವಸ್ಥಾನ ಕುಮನಪಾಳ್ಯ ಶ್ರೀ ಶಿರಾಡಿ ರಾಜನ್ ದೈವ, ಉಳ್ಳಾಕುಲು ಮತ್ತು ಸಪರಿವಾರ ದೈವಗಳ ದೈವಸ್ಥಾನದಲ್ಲಿ ವಾರ್ಷಿಕ ಸಭೆ ಎ. 14ರಂದು ನಡೆಯಿತು. ಈ ಸಂದರ್ಭದಲ್ಲಿ ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು.


ನೂತನ ಅಧ್ಯಕ್ಷರಾಗಿ ಪದ್ಮನಾಭ ರೈ ಅಗೋಳಿಬೈಲುಗುತ್ತು, ಉಪಾಧ್ಯಕ್ಷರಾಗಿ ಭಾಸ್ಕರ ಗೌಡ ಪಂಡಿ ಮತ್ತು ಅಚ್ಚುತ್ತ ಗೌಡ ಆಲ್ಕಬೆ, ಕಾರ್ಯದರ್ಶಿಯಾಗಿ ಶಿವಪ್ರಸಾದ್ ಕೊಠಾರಿ, ಜತೆ ಕಾರ್ಯದರ್ಶಿಯಾಗಿ ಮಹೇಶ್ ಸೂಂತಾರ್, ಖಜಾಂಜಿಯಾಗಿ ಹೊನ್ನಪ್ಪ ಎಂರ್ಬಿಲ, ಸದಸ್ಯರಾಗಿ ಮುರಳಿಧರ ಎಣ್ಣೆಮಜಲು, ಸೀತಾರಾಮ ಬಿಟ್ಟಂಗಿಲ, ದೇವಿಪ್ರಸಾದ್ ನಡುಮನೆ, ರಾಮಚಂದ್ರ ಬಿಟ್ಟಂಗಿಲ, ರಾಜೇಶ್ ಬಿಟ್ಟಂಗಿಲ, ಆಯ್ಕೆಗೊಂಡರು. ಕಾರ್ಯಧ್ಯಕ್ಷರಾಗಿ ರವೀಂದ್ರ ರೈ ಹೊಸಮನೆಗುತ್ತು, ಸಂಘಟನಾ ಕಾರ್ಯದರ್ಶಿಯಾಗಿ ರಾಮಚಂದ್ರ ಎಂರ್ಬಿಲ, ಗೌರವ ಸಲಹೆಗಾರರಾಗಿ ಸುಬ್ರಹ್ಮಣ್ಯ ಕುಳ, ಸುಬ್ರಹ್ಮಣ್ಯ ಭಟ್ ವಿಷ್ಣುಮಂಗಿಲ, ಪಟೇಲ್ ಪುಟ್ಟಣ್ಣ ಗೌಡ ಎಣ್ಣೆಮಜಲು, ಚಂದ್ರಶೇಖರ ‌ಅಕ್ಕೇನಿ, ಭಾಸ್ಕರ ಕೊರಪ್ಪಣೆ ಆಯ್ಕೆಯಾದರು. ವಾರ್ಷಿಕ ಲೆಕ್ಕಪತ್ರ ಮಂಡನೆ ಹಾಗೂ ನೂತನ ಸಮಿತಿಗೆ ಲೆಕ್ಕ ಪತ್ರ ಹಸ್ತಾಂತರ ಕಾರ್ಯಕ್ರಮ ನಡೆಯಿತು.