ಮರ್ಕಂಜ : ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಅತ್ಯಧಿಕ ಮತಗಳ ಅಂತರದಲ್ಲಿ ಗೆದ್ದು ಬರುವಂತೆ ರೆಂಜಾಳ ಶ್ರೀ ಕ್ಷೇತ್ರದಲ್ಲಿ ಪ್ರಾರ್ಥನೆ

0

ಮರ್ಕಂಜ ಶಕ್ತಿಕೇಂದ್ರದ 1ನೇ ಬೂತ್ ಸಮಿತಿ ವತಿಯಿಂದ ಮಂಗಳೂರು ಲೋಕಸಭಾ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅತ್ಯಧಿಕ ಮತಗಳ ಅಂತರದಿಂದ ಗೆದ್ದು ಕೇಂದ್ರದಲ್ಲಿ ನರೇಂದ್ರ ಮೋದಿಯವರ ಸರಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರುವಂತೆ ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಮರ್ಕಂಜ ಶಕ್ತಿಕೇಂದ್ರ ಪ್ರಮುಖ್, ಗ್ರಾ.ಪಂ.ಸದಸ್ಯ ಗೋವಿಂದ ಅಳವುಪಾರೆ, ಬೂತ್ ಸಂಚಾಲಕ ಶಂಕರನಾರಾಯಣ ಉಪಾಧ್ಯಾಯ ಹೊಸೊಳಿಕೆ, ಸೇವಾ ಸಮಿತಿ ಅಧ್ಯಕ್ಷ ಪುಟ್ಟಣ್ಣ ಗೌಡ ಬಾಣೂರು, ಉಪಾಧ್ಯಕ್ಷ ಜಗನ್ಮೋಹನ ರೈ ರೆಂಜಾಳ, ಅನ್ನಪೂರ್ಣ ಸಮಿತಿಯ ಚಿನ್ನಪ್ಪ ಗೌಡ ಬೇರಿಕೆ ಪ್ರಮುಖರಾದ ಸತೀಶ್ ರಾವ್ ದಾಸರಬೈಲು, ಕುಮಾರಸ್ವಾಮಿ ರೆಂಜಾಳ, ಆನಂದ ಗೌಡ ಬಾಣೂರು, ಮಂಜುನಾಥ ರೈ, ಶಶಿಧರ ಹೈದಂಗೂರು, ಸುಬ್ರಹ್ಮಣ್ಯ ಉಪಾಧ್ಯಾಯ ಹೊಸೊಳಿಕೆ, ಶಿವರಂಜನ್ ರಾವ್ ದಾಸರಬೈಲು, ಐತ್ತ ರೆಂಜಾಳ, ಚೇತನ್ ರಾವ್ ರೆಂಜಾಳ, ಕೀರ್ತನ್ ರಾವ್ ರೆಂಜಾಳ, ಶಕ್ತಿಕೇಂದ್ರ ಸಹಪ್ರಮುಖ್ ಶಶಿಕಾಂತ ಗುಳಿಗಮೂಲೆ ಮೊದಲಾದವರು ಉಪಸ್ಥಿತರಿದ್ದರು. ದೇವಳದ ಪ್ರಧಾನ ಅರ್ಚಕರಾದ ಸುಬ್ರಹ್ಮಣ್ಯ ಭಟ್ ಬಳ್ಳಕಾನ ನೇತೃತ್ವದಲ್ಲಿ ಪ್ರಾರ್ಥನೆ ನೆರವೇರಿಸಲಾಯಿತು.