ಸುಳ್ಯ ಸಿ.ಎ.ಬ್ಯಾಂಕ್ ಕಾಂಪ್ಲೆಕ್ಸ್ ನಲ್ಲಿ ಪದ್ಮಾಂಭ ಟಿಫನ್ ಸೆಂಟರ್ ನವೀಕೃತಗೊಂಡು ಶುಭಾರಂಭ

0

ಸುಳ್ಯದ ಮುಖ್ಯ ರಸ್ತೆಯಲ್ಲಿರುವ ಸಿ.ಎ.ಬ್ಯಾಂಕ್ ಕಾಂಪ್ಲೆಕ್ಸ್ ನಲ್ಲಿ ಪದ್ಮಾಂಭ ಟಿಫನ್ ಸೆಂಟರ್ ನವೀಕೃತ ಗೊಂಡು ಇಂದು ಶುಭಾರಂಭಗೊಂಡಿತು.

ಬೆಳಗ್ಗೆ ಅರ್ಚಕರ ನೇತೃತ್ವದಲ್ಲಿ ಗಣಪತಿ ಹವನ ನೆರವೇರಿಸಿ ದೀಪ ಪ್ರಜ್ವಲಿಸಿ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷ ವಿಕ್ರಂ ಅಡ್ಪಂಗಾಯ, ಉಪಾಧ್ಯಕ್ಷ ಚಂದ್ರಶೇಖರ, ಸಿ.ಇ.ಒ ಸುದರ್ಶನ ಸೂರ್ತಿಲ, ಕೆ.ವಿ.ರಾಧಾಕೃಷ್ಣ ನಾಯಕ್, ಶಂಕರ ನಾಯಕ್, ಪುರುಷೋತ್ತಮ ನಾಯಕ್, ಸಾರಸ್ವತ ಕೆಫೆಯ ಮಾಲಕ ನಂದಕುಮಾರ್ ಜಯನಗರ, ಶ್ರೀಮತಿ ಸಂಧ್ಯಾ, ವರ್ಷ ಜ್ಯೂಸ್ ಪಾರ್ಲರ್ ಮಾಲಕ ದಿನೇಶ್ ಕೋಟ್ಯಾನ್ ಹಾಗೂ ಬ್ಯಾಂಕಿನ ಸಿಬ್ಬಂದಿ ಗಳು, ಮತ್ತಿತರರು ಉಪಸ್ಥಿತರಿದ್ದರು.
ಪದ್ಮಾಂಭ ಹೆಸರಿನ
ಸಸ್ಯಹಾರಿ
ಊಟ ಮತ್ತು ಉಪಹಾರ ಮಂದಿರವು ಸಿ.ಎ.ಬ್ಯಾಂಕ್ ಕಾಂಪ್ಲೆಕ್ಸ್ ನಲ್ಲಿ ಕಳೆದ 25 ವರ್ಷಗಳಿಂದ
ವ್ಯವಹರಿಸುತ್ತಿದ್ದು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.
ಟೀ,ಕಾಫಿ, ಕಷಾಯ ಹಾಗೂ ಶುಚಿ ರುಚಿಯಾದ ತಿಂಡಿ ತಿನಿಸುಗಳು ಮತ್ತು
ಸ್ಪೇಷಲ್ ಅನ್ನ ಸಾಂಬಾರು ದೊರೆಯುತ್ತದೆ ಎಂದು ಮಾಲಕರು ತಿಳಿಸಿದರು.