ಅಡ್ಪಂಗಾಯ ಅಯ್ಯಪ್ಪ ಮಂದಿರದಲ್ಲಿ ‘ಮೇಷ’ ಸಂಕ್ರಮಣದ ಪ್ರಯುಕ್ತ ದುರ್ಗಾಪೂಜಾ ಕಾರ್ಯಕ್ರಮ

0

ಅಜ್ಜಾವರ ಗ್ರಾಮದ ಅಡ್ಪಂಗಾಯ ಅಯ್ಯಪ್ಪ ಮಂದಿರದಲ್ಲಿ ಮೇಷ ಸಂಕ್ರಮಣದ ಪ್ರಯುಕ್ತ ಸಂಕ್ರಮಣ ಪೂಜೆ ಹಾಗೂ ದುರ್ಗಾಪೂಜಾ ಕಾರ್ಯಕ್ರಮ ಎ. 16 ರಂದು ನಡೆಯಿತು.

ಪ್ರಾತಃಕಾಲ ಗಣಪತಿ ಹವನ, ಸಂಜೆ ಅಯ್ಯಪ್ಪ ವೃತಧಾರಿಗಳಿಂದ ದೀಪರಾಧನೆ, ಭಜನಾ ಕಾರ್ಯಕ್ರಮ ಭಜನಾ ಸೇವೆಯನ್ನು ಸಂಧ್ಯಾ ಮತ್ತು ಬಳಗ ಮಂಡೆಕೋಲು ಇವರು ನಡೆಸಿಕೊಟ್ಟರು.

ನಂತರ ದುರ್ಗಾಪೂಜೆ ಹಾಗೂ ಅಯ್ಯಪ್ಪ ಸ್ವಾಮಿಗೆ ಮಹಾಪೂಜೆ ನಡೆಯಿತು.

ಸನ್ಮಾನ ಕಾರ್ಯಕ್ರಮದಲ್ಲಿ ಶ್ರೀ ಕ್ರೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ತಾಲೂಕಿನ ಯೋಜನಾಧಿಕಾರಿ ನಾಗೇಶ್. ಪಿ ಹಾಗೂ ಸಾಮಾಜಿಕ ಧುರೀಣೆ ಶ್ರೀಮತಿ ವಿನುತ ಪಾತಿಕಲ್ಲು ಇವರುಗಳನ್ನು ಶ್ರೀ ಕ್ಷೇತ್ರದ ಧರ್ಮದರ್ಶಿ ಶ್ರೀ ಶಿವಪ್ರಕಾಶ್ ಅಡ್ಪಂಗಾಯರು ಫಲ, ಪುಷ್ಪ, ಸನ್ಮಾನಪತ್ರದೊಂದಿಗೆ ಶಾಲು ಹೊದಿಸಿ ಸನ್ಮಾನಿಸಿದರು.

ಶ್ರೀ ದೇವರ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆಯೊಂದಿಗೆ ಈ ಕಾರ್ಯಕ್ರಮ ಸಂಪನ್ನಗೊಂಡಿತು.