ಸುಳ್ಯದಲ್ಲಿ ಜನಾಆಶಾ ಸೌತ್ ನಿಧಿ ಸ್ಮಾರ್ಟ್ ಬ್ಯಾಂಕಿಂಗ್ ಶಾಖೆಯ ಉದ್ಘಾಟನೆ

0

ಸುಳ್ಯದ ಶಾಸ್ತ್ರಿ ಸರ್ಕಲ್ ಬಳಿಯ ಕರಾವಳಿ ಟವರ್ಸ್ ನಲ್ಲಿ ಜನಾಆಶಾ ಸೌತ್ ನಿಧಿ ಲಿ.ಸ್ಮಾರ್ಟ್ ಬ್ಯಾಂಕಿಂಗ್ ಇದರ 24 ನೇ ಶಾಖಾ ಕಚೇರಿಯ ಉದ್ಘಾಟನೆಯು ಎ.18 ರಂದು ನೆರವೇರಿತು.
ಸಂಸ್ಥೆಯ ಗ್ರೂಪ್ ನಿರ್ದೇಶಕ ಗಿರೀಶ್ ಆಲೂರ್ ಉದ್ಘಾಟಿಸಿದರು. ರೀಜನಲ್ ಮೆನೇಜರ್ ಎಸ್.ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು.


ಮುಖ್ಯ ಅತಿಥಿಗಳಾಗಿ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ನ.ಪಂ.ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ, ಜನತಾ ಗ್ರೂಪ್ಸ್ ಮಾಲಕ ಕೆ.ಎಂ.ಅಬ್ದುಲ್ ಮಜೀದ್, ಡೆವೆಲಪ್ಮೆಂಟ್‌ ಮೆನೇಜರ್ ನಂದೀಶ್,ಚೆಲುವಕೃಷ್ಣಮೂರ್ತಿ, ಪಿ.ಆರ್.ಒ ರಾಜೇಶ್ ಚೊಕ್ಕಾಡಿ, ಡೆವೆಲಪ್ಮೆಂಟ್‌ ಆಫೀಸರ್ ಪ್ರತೀಶ್ ಎ.ಎಸ್, ಸೀನಿಯರ್ ಕಸ್ಟಮರ್ ರಿಲೇಷನ್ ಆಫೀಸರ್ ಸುಧಾಕರ ಎಂ, ಸಿ.ಆರ್.ಒ ಲೋಕೇಶ್ ಎಂ.ಹೆಚ್, ಕರಾವಳಿ ಕಾಂಪ್ಲೆಕ್ಸ್ ಮಾಲಕ ಚೆನ್ನಪ್ಪ ಗೌಡ ಕುಕ್ಕುಜೆ,ಸೌಮ್ಯ ಮಿತ್ತಡ್ಕ, ಗೀತಾ ಮರ್ಕಂಜ, ಮೋಹಿನಿ ಗೂನಡ್ಕ, ಪದ್ಮಾವತಿ ಕೊಡಿಯಾಲಬೈಲ್, ನೆಜುಮುನ್ನೀಸ ಜಟ್ಟಿಪಳ್ಳ ಉಪಸ್ಥಿತರಿದ್ದರು. ರಾಜೇಶ್ ಚೊಕ್ಕಾಡಿ ಸ್ವಾಗತಿಸಿದರು. ಸುಧಾಕರ ನಾಗಪಟ್ಟಣ ಕಾರ್ಯಕ್ರಮ ನಿರೂಪಿಸಿದರು.


ಸಂಸ್ಥೆಯು ಆರ್.ಬಿ.ಐ. ಮಾನ್ಯತೆ ಪಡೆದು ಭಾರತದ ಹಲವು ರಾಜ್ಯಗಳಲ್ಲಿ ಶಾಖೆಯನ್ನು ‌ಹೊಂದಿದೆ. ಠೇವಣಿಗಳ ಮೇಲೆ ಆಕರ್ಷಕ‌ ಬಡ್ಡಿ ಹಾಗೂ ಸರಳ‌ ಸಾಲ ಸೌಲಭ್ಯಗಳು ಮತ್ತು ‌ಯುವಕ ಯುವತಿಯರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡಲಾಗುತ್ತಿದೆ ಎಂದು ಸಂಸ್ಥೆಯ ಮೆನೇಜರ್ ರವರು ತಿಳಿಸಿದರು.