ಸುಬ್ರಹ್ಮಣ್ಯ ಅಶೋಕ್ ನೆಕ್ರಾಜೆ ನೇತ್ರತ್ವದಲ್ಲಿ ಜೆ.ಡಿ.ಎಸ್ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

0

ಸುಬ್ರಹ್ಮಣ್ಯದಲ್ಲಿ ಇಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವರಾದ ದಿನೇಶ್ ಗುಂಡುರಾವ್ ಸಮ್ಮುಖದಲ್ಲಿ ಸುಬ್ರಹ್ಮಣ್ಯ ತಾಲೂಕು ಪಂಚಾಯತ್ ನಿಕಟ ಪೂರ್ವ ಸದಸ್ಯ ಅಶೋಕ್ ನೆಕ್ರಾಜೆಯವರ ನೇತೃತ್ವದಲ್ಲಿ ಕಡಬ ತಾಲೂಕು ಜೆ.ಡಿ.ಎಸ್ ಗೌರವಾಧ್ಯಕ್ಷರಾದ ಎಂ.ಪಿ ದಿನೇಶ್ ಮಾಸ್ತರ್ , ವಲಯ ಅಧ್ಯಕ್ಷ, ಗ್ರಾ. ಪಂ. ಮಾಜಿ ಸದಸ್ಯ ಕಿಶೋರ್ ಅರಂಪಾಡಿ, ತಾಲೂಕು ಜೆಡಿಎಸ್ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಚನ್ನಕಜೆ, ಉದ್ಯಮಿ ಶಿವರಾಮ, ಅಕ್ಷಯ್, ಅರಣ ಮತ್ತು ಉಪೇಂದ್ರರನ್ನು ಕಾಂಗ್ರೇಸ್ ಪಕ್ಷಕ್ಕೆ ಉಸ್ತುವಾರಿ ಸಚಿವರಾದ ದಿನೇಶ್ ಗುಂಡುರಾವ್, ದ.ಕ. ಜಿಲ್ಲಾಧ್ಯಕ್ಷ ಶಾಸಕ ಹರೀಶ್ ಕುಮಾರ್, ಗೇರು ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಬ್ಲಾಕ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಬರಮಾಡಿಕೊಂಡರು. ಸುಬ್ರಹ್ಮಣ್ಯದ ವೆಲಂಕನಿ ಸದಸನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಗ್ರಾಮ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಶಿವರಾಮ ರೈ, ಸುಳ್ಯ ವಿಧಾನಸಭಾ ಉಸ್ತುವಾರಿ ವೆಂಕಪ್ಪಗೌಡ, ಕೆ.ಪಿ.ಸಿ.ಸಿ ಜಿ .ಕೃಷ್ಣಪ್ಪ, ಪವನ್ ಎಂ. ಡಿ, ಕಿರಣ್ ಬುಡ್ಲೆಗುತ್ತು, ರಾಜೀವಿ ರೈ, ಸರಸ್ವತಿ ಕಾಮತ್, ಉಷಾ ಅಂಚನ್ ಮತ್ತಿತರ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.