ಮನೆಯಂಗಳದ ಬಾವಿಯಲ್ಲಿ ಇದ್ದಕ್ಕಿದ್ದಂತೆ ಉಕ್ಕಿ ಬರುತ್ತಿದೆ ನೀರು

0

ಮಣ್ಣು ಕುಸಿತದಿಂದಾಗಿ ಅಪಾಯಕಾರಿ ಸ್ಥಿತಿಯಲ್ಲಿದೆ ಮನೆ

ಅಜ್ಜಾವರ ಗ್ರಾಮದ ಮುಳ್ಯ ಅಟ್ಲೂರು
ನಿವಾಸಿ ಆನಂದ ಎಂಬವರ ಮನೆಯಂಗಳದಲ್ಲಿರುವ ಬಾವಿಯಲ್ಲಿ ಇತ್ತೀಚೆಗೆ ನೀರು ಸಂಪೂರ್ಣವಾಗಿ ಬತ್ತಿಹೋಗಿತ್ತು. ಇವತ್ತು ಬೆಳಗ್ಗೆ ಇದ್ದಕ್ಕಿದ್ದಂತೆ ಬಾವಿಯಲ್ಲಿ ನೀರು ತುಂಬುತ್ತಿದ್ದು ರಿಂಗ್ ಅಳವಡಿಸಿದವರೆಗೂ ನೀರು ತುಂಬಿ ಒಳ ಭಾಗದಲ್ಲಿ ಮಣ್ಣು ಕುಸಿಯಲಾರಂಭಿಸಿದೆ.


ಮನೆಯ ಅಂಗಳದಲ್ಲಿ ಬಾವಿ ಇರುವುದರಿಂದ ಮಣ್ಣು ಕುಸಿತ ಜಾಸ್ತಿಯಾದಲ್ಲಿ
ಮನೆಗೆ ಹಾನಿ ಸಂಭವಿಸಬಹುದೆಂದು ಮನೆಯವರಿಗೆ ಭೀತಿಯುಂಟಾಗಿದೆ.