ಹಳೆಗೇಟು : ಉಡುಪಿ ಭವನ ಹೋಟೆಲ್ ಶುಭಾರಂಭ

0

ಸುಳ್ಯ ಹಳೆಗೇಟು ಕೆ.ಎಂ.ಬಿಲ್ಡಿಂಗ್ ನಲ್ಲಿ ಸತೀಶ್ ಪೂಜಾರಿ ಅವರ ಮಾಲಕತ್ವದ ಹೋಟೆಲ್ ಉಡುಪಿ ಭವನ ಶುಭಾರಂಭಗೊಂಡಿತು.
ನೂತನ ಸಂಸ್ಥೆಯನ್ನು ಗಣ ಹೋಮ ಪೂಜಾ ಕಾರ್ಯಕ್ರಮದೊಂದಿಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಅರ್ಚಕ ಶಿವಪ್ರಸಾದ್ ಕೆದಿಲಾಯ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಅಣ್ಣಪ್ಪ ಪೂಜಾರಿ ಹಾಗೂ ಸಿಬ್ಬಂದಿ ವರ್ಗದವರು ಸ್ಥಳೀಯರು ಉಪಸ್ಥಿತರಿದ್ದರು.
ಏಪ್ರಿಲ್ 26 ರಂದು ಶುಕ್ರವಾರದಂದು ಹೋಟೆಲ್ ನಲ್ಲಿ ಕಾರ್ಯ ಚಟುವಟಿಕೆ ಆರಂಭಗೊಳ್ಳಲಿದ್ದು, ಇಲ್ಲಿ ಶುದ್ಧ ಸಸ್ಯಹಾರಿ, ಚಾಟ್ಸ್ ಐಟಂ, ಸ್ಪೆಷಲ್ ದೋಸೆ ಹಾಗೂ, ಚೈನೀಸ್ ಸ್ಪೆಷಲ್ ಮುಂತಾದ ರುಚಿ ರುಚಿಯಾದ ಖಾದ್ಯಗಳು ಲಭಿಸಲಿದೆ ಎಂದು ಮಾಲಕರು ತಿಳಿಸಿದ್ದಾರೆ. ಅಲ್ಲದೆ ಈ ಸಂಸ್ಥೆಯಲ್ಲಿ ಕ್ಯಾಟರಿಂಗ್ ವ್ಯವಸ್ಥೆಯು ಕೂಡ ಲಭ್ಯವಿದೆ ಎಂದು ಅವರು ಹೇಳಿದ್ದಾರೆ.