ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿದ ಶೃಂಗೇರಿ ಮಠಾಧೀಶರು: ಇಂದು (27ರಂದು) ಸಾರ್ವಜನಿಕ ಪಾದಪೂಜೆ-ಭಿಕ್ಷಾವಂದನೆ

0

ಶೃಂಗೇರಿ ಪೀಠಾಧೀಶರಾದ ಶ್ರೀಮಜ್ಜಗದ್ಗರು ಶ್ರೀ ಶ್ರೀ ವಿಧುಶೇಖರಭಾರತೀ ಸ್ವಾಮಿಗಳು ನಿನ್ನೆ ಸಂಜೆ ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿದರು.

ಈ ಸಂದರ್ಭದಲ್ಲಿ ಶ್ರೀ ಗುರುಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಬಳಿಕ ಧೂಳಿಪಾದಪೂಜೆ, ಫಲ ಸಮರ್ಪಣೆ, ರಾತ್ರಿ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಪುಷ್ಪಾಂಜಲಿ, ಮಂಗಳಾರತಿ, ಅನ್ನಸಂತರ್ಪಣೆ ನಡೆಯಿತು. ಇಂದು ಶ್ರೀ ತ್ರಿಶೂಲಿನೀ ಸನ್ನಿಧಿಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ಪ್ರಸನ್ನ ಪೂಜೆ, ಸಾರ್ವಜನಿಕರಿಂದ ಪಾದಪೂಜೆ – ಭಿಕ್ಷಾವಂದನೆ ನಡೆದು, 10.30ರಿಂದ ಶ್ರೀ ಜಗದ್ಗುರುಗಳಿಂದ ಅನುಗ್ರಹಭಾಷಣ, ಸಮಸ್ತಭಕ್ತರಿಗೆ ಫಲಮಂತ್ರಾಕ್ಷತೆ, ಅನ್ನಸಂತರ್ಪಣೆ ನಡೆಯಲಿದೆ.