ಸುಳ್ಯ ಶ್ರೀ ಚೆನ್ನಕೇಶವ ದೇವರಿಗೆ ನೂತನ ರಥ ನಿರ್ಮಾಣಕ್ಕೆ ರಥ ಶಿಲ್ಪಿಗೆ ವೀಳ್ಯ ಪ್ರದಾನ

0

ಸುಳ್ಯ ಶ್ರೀ ಚೆನ್ನಕೇಶವ ದೇವರಿಗೆ ನೂತನ ಬ್ರಹ್ಮರಥ ನಿರ್ಮಾಣವಾಗಲಿದ್ದು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಡಾ.ಕೆ.ವಿ ಚಿದಾನಂದ ರವರು ಸಮರ್ಪಿಸುವ ನೂತನ ಬ್ರಹ್ಮ ರಥ ನಿರ್ಮಾಣಕ್ಕೆ ಎ.28 ರಂದು ದೇವರ ಸನ್ನಿಧಿಯಲ್ಲಿ ಪ್ರಾರ್ಥಿಸಿ ರಥ ಶಿಲ್ಪಿ ಕೋಟೇಶ್ವರ ರಾಜಗೋಪಾಲ ಆಚಾರ್ಯ ರಿಗೆ ವೀಳ್ಯಪ್ರಧಾನ ಮಾಡಲಾಯಿತು.


ಈ ಸಂದರ್ಭದಲ್ಲಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾ.ಹರಪ್ರಸಾದ ತುದಿಯಡ್ಕ,ಡಾ .ಕೆ.ವಿ ಚಿದಾನಂದ ದಂಪತಿಗಳು,ಲಿಂಗಪ್ಫಗೌಡ ಕೇರ್ಪಳ,ಡಾ.ಲೀಲಾಧರ , ಹರಿರಾಯ ಕಾಮತ್ ಮುಂತಾದವರು ಉಪಸ್ಥಿತರಿದ್ದರು.