ಕಾಸರಗೋಡಿನ ಹೆಸರಾಂತ ಬಿಂದು ಜ್ಯುವೆಲ್ಲರಿ ಸುಳ್ಯದಲ್ಲಿ ಶುಭಾರಂಭ

0

ಚಿನ್ನಾಭರಣ ಉದ್ಯಮದಲ್ಲಿ 42 ವರ್ಷಗಳ ಅನುಭವವಿರುವ ಬಿಂದು ಜ್ಯುವೆಲ್ಲರಿ ಸುಳ್ಯದಲ್ಲಿ ಸಾಗರದಾಚೆ ಬೆಳೆಯಲಿ: ಭಾಗೀರಥಿ ಮುರುಳ್ಯ

ಕಾಸರಗೋಡು ಮಳಿಗೆಗೆ ಸುಳ್ಯದ ಗ್ರಾಹಕರು ಬರುತ್ತಿದ್ದಾರೆ ಅವರ ಅನುಕೂಲಕ್ಕೆ ಸುಳ್ಯದಲ್ಲಿ ಪ್ರಾರಂಭಿಸಿದ್ದೇವೆ ಸುಳ್ಯದ ಜನತೆ ಜನತೆಯ ಸಹಕಾರ ಬಯಸುತ್ತೆವೆ: ಅಭಿಲಾಷ್ & ಡಾ.ಅಜಿತೇಶ್

ಕಾಸರಗೋಡಿನಲ್ಲಿ ಕಳೆದ ೪೨ ವರ್ಷಗಳ ಹಿಂದೆ ಸಂಸ್ಥಾಪಕರಾದ ದಿ| ಕೆ.ವಿ ಕುಂಞಿಕಣ್ಣನ್ ರವರು ಸ್ಥಾಪಿಸಿ ಕಾಸರಗೋಡಿನಲ್ಲಿ ವಿಶಾಲವಾದ ಬೃಹತ್ ಎರಡು ಮಳಿಗೆಯನ್ನು ಹೊಂದಿದ್ದು ಇದೀಗ ಕಾಸರಗೋಡಿನ ಗಡಿ ಪ್ರದೇಶವಾದ ಸುಳ್ಯದಲ್ಲಿ ತಮ್ಮ ಮೂರನೇ ಮಳಿಗೆಯನ್ನು ಪ್ರಾರಂಭಗೊಂಡಿದೆ
ಇದರ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಎ.೨೬ ರಂದು ನಡೆಯಿತು.
ಕಾರ್ಯಕ್ರಮಕ್ಕೆ ಬಿಂದು ಜುವೆಲ್ಲರಿ ಪಾಲುದಾರರ ಮಾತೃಶ್ರೀ ಶ್ರೀಮತಿ ಶೋಭನಾ ಕುಂಞಿಕಣ್ಣನ್ ಚಾಲನೆ ನೀಡಿದರು
ಅಬಿಲಾಷ್,ಡಾ.ಅಜಿತೇಶ್,ಶ್ರೀಮತಿ ಸವಿತಾ ಅಬಿಲಾಷ್,ಶ್ರೀಮತಿ ಡಾ.ಲಿಜಿಷಾ ಅಜಿತೇಶ್, ಶ್ರೀಮತಿ ಬಿಂದು, ಶ್ರೀಮತಿ ಡಾ.ಬಿನಾ,ಶ್ರೀಮತಿ ಡಾ.ಬಬಿತಾ,ಅಜಯ್ ಕುಮಾರ್, ಪ್ರೇಮ್ ರಾಜ್,ಡಾ.ಶಶಿಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಸುಳ್ಯ ನಗರದ ಪೋಲಿಸ್ ಠಾಣೆಯ ಮುಂಭಾಗದಲ್ಲಿರುವ ಸುಸಜ್ಜಿತವಾದ ಸೊಮಾಯಾಗಿ ಕಟ್ಟಡದಲ್ಲಿ ಅತ್ಯಾಧುನಿಕ ಆಕರ್ಷಣೆಗಳೊಂದೊಗೆ ಬಿಂದು ಜುವೆಲ್ಲರಿ ಸುಳ್ಯ ಮಳಿಗೆ ಎ.೨೭ ರಂದು ಉದ್ಘಾಟನೆಗೊಂಡಿತು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ,ಚಿತ್ರನಟ ಅರ್ಜುನ್ ಕಾಪಿಕಾಡ್,ಚಿತ್ರನಟಿ ವಿಕ್ಕಿಷಾ ರಾವ್ ಉದ್ಘಾಟಿಸಿದರು
ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ .ಬಿ ಸುಧಾಕರ ರೈ, ಸುಳ್ಯ ಬಂಟರ ಸಂಘದ ಅಧ್ಯಕ್ಷ ಜಯಪ್ರಕಾಶ್ ರೈ, ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ಎಂ ವೆಂಕಪ್ಪ ಗೌಡ, ವಿನಯಕುಮಾರ್ ಕಂದಡ್ಕ,ಎನ್.ಎ ರಾಮಚಂದ್ರ, ನ.ಪಂ ಸದಸ್ಯರಾದ ರಾಜುಪಂಡಿತ್,ಶ್ರೀಮತಿ ಕಿಶೋರಿ ಶೇಟ್,ಗಾಂಧಿನಗರ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಕೆ.ಎಂ ಮುಸ್ತಫಾ, ಎಪಿಎಂಸಿ ಮಾಜಿ ನಿರ್ದೇಶಕ ಆದಂ ಹಾಜಿ ಕಮ್ಮಾಡಿ,ಎಂ ಬಿ ಫೌಂಡೇಶನ್ ಅಧ್ಯಕ್ಷ ಎಂ ಬಿ ಸದಾಶಿವ,ಸುಳ್ಯ ಪೋಲಿಸ್ ವೃತ್ತ ನಿರೀಕ್ಷಕರಾದ ಸತ್ಯನಾರಾಯಣ, ಹಿರಿಯ ಉದ್ಯಮಿ ಕೃಷ್ಣ ಕಾಮತ್,ಪ್ರಭಾಕರ ನಾಯರ್, ಗೋಕುಲ್ ದಾಸ್ ,ಅಬ್ದುಲ್ಲಾ ಹಾಜಿ ಕಟ್ಟೆಕ್ಕಾರ್,ಹಾಜಿ ಅಬ್ದುಲ್ ಹಮೀದ್ ಜನತಾ, ಸೋಮಾಯಾಗಿ ಕಟ್ಟಡ ಮಾಲಕ ರಮೇಶ್,ನ.ಪಂ ಸದಸ್ಯ ಶರೀಫ್ ಕಂಠಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಕಾಸರಗೋಡಿನಲ್ಲಿ ಕಳೆದ೪೨ ವರ್ಷಗಳಿಂದ ರಿಟೇಲ್ ಜುವೆಲ್ಲರಿ ಉದ್ಯಮದಲ್ಲಿ ಹೆಸರಾಂತ ಬ್ರಾಂಡ್ ಆಗಿರುವ ಬಿಂದು ಜುವೆಲ್ಲರಿ ಗ್ರಾಹಕರಿಗೆ ಮನಮೆಚ್ಚುವ ಅತ್ಯಾಧುನಿಕ ಶೈಲೀಯ ವಿವಿಧ ವಿನ್ಯಾಸದ ಅತ್ಯುತ್ತಮ ಶ್ರೇಣಿಯ ಸಾಂಪ್ರದಾಯಿಕ ಮತ್ತು ಅಧುನಿಕ ಆಭರಣ ಗಳನ್ನು ಒದಿಸುತ್ತ ಬಂದಿರುವ ಸಂಸ್ಥೆ ಬಿಂದು ಜುವೆಲ್ಲರಿ. ಈ ಎಲ್ಲಾ ವಿಶ್ವದೆಲ್ಲೆಡೆ ಇರುವ ಮನಮೋಹಕ ವಿನ್ಯಾಸದ ಆಭರಣಗಳು ಮತ್ತು ಸ್ಥಳೀಯವಾಗಿ ವಿನ್ಯಾಸಗೊಂಡ ಆಭರಣಗಳನ್ನು ಸುಳ್ಯದ ಜನತೆ ಆರ್ಪೀಸಲು ಸುಳ್ಯದಲ್ಲಿ ಜುವೆಲ್ಲರಿ ಆರಂಬಿಸುತ್ತಿದ್ದೇವೆ ಎಂದು ಆಡಳಿತ ಪಾಲುದಾರರಾದ ಅಬಿಲಾಷ್ ಕೆ ವಿ ಮತ್ತು ಡಾ.ಅಜಿತೇಶ್ ಕೆ ವಿ ತಿಳಿಸಿದ್ದಾರೆ.

ಪ್ರಥಮ ಗ್ರಾಹಕರಿಗೆ ಗೋಲ್ಡ್ ಹಸ್ತಾಂತರ
ನೂತನ ಮಳಿಗೆಯಲ್ಲಿ ಪ್ರಥಮ ಗ್ರಾಹಕರ ಹರ್ಷ ಮೆಡಿಕಲ್ ರಮೇಶ್ ರವರ ಪುತ್ರಿ ಡಾ.ಸಂಜನ ಆರ್ ಸೊಮಾಯಾಗಿ ರವರು ಹಾಗೂ ಜಾಲ್ಸೂರ್ ಶ್ರೀಮತಿ ಭಾರತಿ ಜಯಂತ ಗೌಡ ಕಾಳಂಮನೆ ಯವರು ಪ್ರಥಮ ಮತ್ತು ದ್ವಿತೀಯ ಖರೀದಿದಾರರಾಗಿ ಚಿನ್ನಭಾರಣ ಖರೀದಿಸಿದರು ಪ್ರಥಮ ಮತ್ತು ದ್ವಿತೀಯ ಗ್ರಾಹಕರಿಗೆ ಸುಳ್ಯ ಪೋಲಿಸ್ ವೃತ್ತ ನಿರೀಕ್ಷಕರಾದ ಸತ್ಯನಾರಾಯಣ ಹಾಗೂ ಸುಳ್ಯ ನ.ಪಂ ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ರವರು ಹಸ್ತಾಂತರ ಮಾಡಿದರು.
ಸುಳ್ಯ ಮದರ್ ತೆರೇಸಾ ಚರ್ಚ್ ಧರ್ಮಗುರುಗಳಾದ ರೆ.ಪಾ.ಕ್ರಿಸ್ಟಿನ್ ಬಿಂದು ಚಿನ್ನದ ಸ್ಕಿಂ ಇದರ ಕಾರ್ಡ್ನ್ನು ಬಿಡುಗಡೆ ಗೊಳಿಸಿದರು.
ಪ್ರಥಮವಾಗಿ ಸುಳ್ಯ ಪೈಚಾರ್ ನಿನಾದ್ ಮೂರ್ತಿ ಹಾಗೂ ಅಹಮದ್ ಮುಹಾದ್ ಚಿನ್ನದ ಸ್ಕಿಂ ಯೋಜನೆ ಕಾರ್ಡ್ ನ್ನು ಪಡೆದುಕೊಂಡರು.
ಪತ್ರಕರ್ತ ಶರೀಫ್ ಜಟ್ಟಿಪಳ್ಳ ಹಾಗೂ ಅವಿನಾಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.