ಸಂಪಾಜೆಯಲ್ಲಿ ಗ್ರಾಮೀಣ ಮಕ್ಕಳಿಗಾಗಿ ರಂಗ ಶಿಬಿರ

0

ರಂಗಮಯೂರಿ ಕಲಾಶಾಲೆ (ರಿ.)ಸುಳ್ಯ ಪ್ರಸ್ತುತ ಪಡಿಸುವ ಶ್ರೀ ಭಗವಾನ್ ಸಂಘ ಊರುಬೈಲು ಸಹಯೋಗದೊಂದಿಗೆ ರಂಗಶಿಬಿರ ೨೦೨೪ ಶ್ರೀ ಪಂಚಲಿಗೇಶ್ವರ ದೇವಸ್ಥಾನ ಸಂಪಾಜೆ ಇಲ್ಲಿ ಉದ್ಘಾಟನೆಗೊಂಡಿತು.

ವೇದಿಕೆಯಲ್ಲಿ ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಎನ್.ಸಿ. ಅನಂತ್ ಊರುಬೈಲು, ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಉಪಾಧ್ಯಕ್ಷ ರಾಜಾರಾಮ್ ಕಳಗಿ, ಪ್ರಶಾಂತ್ ಊರುಬೈಲು ಕಾರ್ಯದರ್ಶಿಗಳು ಶ್ರೀ ಭಗವಾನ್ ಸಂಘ ಊರುಬೈಲು ಉಪಸ್ಥಿತರಿದ್ದರು.
ರಂಗಮಯೂರಿ ಕಲಾಶಾಲೆ ನಿರ್ದೇಶಕರಾದ ಲೋಕೇಶ್ ಊರುಬೈಲು ಸ್ವಾಗತಿಸಿದರು, ವಿದ್ಯಾರ್ಥಿ ಸಿಂಚನ ಪುತ್ತಿಲ ವಂದನಾರ್ಪಣೆಗೈದರು ಶಶಿಕಾಂತ್ ಮಿತ್ತೂರು ಕಾರ್ಯಕ್ರಮ ನಿರೂಪಿಸಿದರು.
ಶಿಬಿರದಲ್ಲಿ,ರಂಗಾಟಗಳು , ರಂಗಗೀತೆ,ರಂಗನಡೆ ,ಮಾತುಗಾರಿಕೆ,ಅಭಿನಯ, ಆರ್ಟ್ &ಕ್ರಾಫ್ಟ್, ಪ್ರಥಮಚಿಕಿತ್ಸೆ, ಇವುಗಳ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ನಡೆಸಲಾಗುವುದು ಸಂಪನ್ಮೂಲ ವ್ಯಕ್ತಿಗಳಾಗಿ ಹೇಮಂತ್ ಕುಮಾರ್ ಬೆಂಗಳೂರು, ಶ್ರೀ ಮತಿ ಪೂರ್ಣಿಮಾ ಚೊಕ್ಕಾಡಿ, ದೇವಿಪ್ರಸಾದ್ ಕಾಯರ್ತೋಡಿ, ಮೇಘಕೃಷ್ಣ ಕಾಯರ್ತೋಡಿ, ಹವ್ಯಶ್ರೀ ಕಲ್ಲಾಜೆ, ಶ್ರವಣ್ ಶೆಟ್ಟಿ ಉಪಸ್ಥಿತರಿದ್ದರು.