ಜಾಲ್ಸೂರು: ನವೋದಯ ಟ್ರಸ್ಟ್ ವತಿಯಿಂದ ದಿ. ಬಾಬು ಪಾಟಾಳಿ ಅರಿಯಡ್ಕ ಕುಟುಂಬಕ್ಕೆ ಚೈತನ್ಯ ವಿಮಾ ಯೋಜನೆಯ ಚೆಕ್ ಹಸ್ತಾಂತರ

0

ನವೋದಯ ಟ್ರಸ್ಟ್ ವತಿಯಿಂದ ಜಾಲ್ಸೂರಿನ ಶ್ರೀಲಕ್ಷ್ಮಿ ನವೋದಯ ಸ್ವಸಹಾಯ ಸಂಘದ ಸದಸ್ಯ ದಿ. ಬಾಬು ಪಾಟಾಳಿ ಅರಿಯಡ್ಕ ಅವರು ರಿಕ್ಷಾ ಅಪಘಾತದಲ್ಲಿ ಮೃತಪಟ್ಟಿದ್ದು, ಅವರ ಪತ್ನಿ ಶ್ರೀಮತಿ ವೇದಾವತಿ ಅವರಿಗೆ ಚೈತನ್ಯ ವಿಮಾ ಯೋಜನೆಯ ಒಂದು ಲಕ್ಷ ರೂ. ಚೆಕ್ಕನ್ನು ಮೇ.9ರಂದು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ನವೋದಯ ಸಂಘದ ಸುಳ್ಯ ತಾಲೂಕಿನ ಮೇಲ್ವಿಚಾರಕ ಶ್ರೀಧರ, ಸಂಘದ ಕನಕಮಜಲು ವಲಯ ಪ್ರೇರಕಿ ಸುಗಂಧಿ, ಕನಕಮಜಲು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ನಾರಾಯಣ ಗೌಡ ಬೊಮ್ಮೆಟ್ಟಿ , ಉಪಾಧ್ಯಕ್ಷ ಕರುಣಾಕರ ರೈ ಕುಕ್ಕಂದೂರು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲೋಹಿತ್ ಕುಮಾರ್ ಕುದ್ಕುಳಿ, ನವೋದಯ ಸಂಘದ ಸದಸ್ಯರಾದ ಚಂದ್ರಶೇಖರ ಕಾಳಮನೆ, ಮೋಹಿನಿ, ಗುಡ್ಡಪ್ಪ ಗೌಡ, ಮೋಹಿನಿ ಕುಂದ್ರುಕೋಡಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.