ಪಂಜ: ಮಾಯಿಲ ಕೋಟೆ ಸಾನಿಧ್ಯದ ಜೀರ್ಣೋದ್ಧಾರ ಸಮಿತಿ ಸಭೆ

0

ಪಂಜ ಸೀಮೆಯ ಮಾಯಿಲ ಕೋಟೆ ಸಾನಿಧ್ಯ ಜೀರ್ಣೋದ್ಧಾರ ಸಮಿತಿ ಸಭೆ ಜೂ.23 ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ರವರ ಅಧ್ಯಕ್ಷತೆಯಲ್ಲಿ ಜರುಗಿತು.

ವೇದಿಕೆಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸದಾಶಿವ ಪಳಂಗಾಯ ,,ಕಾರ್ಯಾಧ್ಯಕ್ಷ ಬಿಶ್ವಜೀತ್ ಪಳಂಗಾಯ,ಉಪಾಧ್ಯಕ್ಷ ಕುಮಾರ್ ಬಳ್ಳಕ್ಕ,ಸುದರ್ಶನ್ ಪಟ್ಟಾಜೆ,ತಮ್ಮಯ್ಯ ನಾಯ್ಕ ಪಟ್ಟಾಜೆ,ಕಾರ್ಯದರ್ಶಿ ಅಶ್ವಥ್ ಪಳಂಗಾಯ ಉಪಸ್ಥಿತರಿದ್ದರು..ಜೂ. 29 ರಂದು ದೈವಜ್ಞ ಪ್ರಸಾದ್ ಪಂಗಣ್ಣರವರ ನೇತೃತ್ವದಲ್ಲಿ ನಡೆಯುವ ಅನುಜ್ಞ ಕಲಶ ಹಾಗೂ ಸ್ಥಳ ಪ್ರಶ್ನಾ ಚಿಂತನೆಯ ಪೂರ್ವತಯಾರಿ ಬಗ್ಗೆ ತೀರ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸುದರ್ಶನ್ ಪಟ್ಟಾಜೆ ಸ್ವಾಗತಿಸಿದರು ಮತ್ತು ವಂದಿಸಿದರು .