![](https://sullia.suddinews.com/wp-content/uploads/2024/06/feb984ea-d799-46d8-bb43-e3e6572b1dcd-768x1024.jpg)
ಸುಬ್ರಹ್ಮಣ್ಯದ ಕೆ.ಎಸ್.ಆರ್.ಟಿ .ಸಿ ಬಸ್ ತಂಗುದಾಣದಲ್ಲಿ ಕಸದ ರಾಶಿ ಕಂಡು ಬಂದಿದೆ.
![](https://sullia.suddinews.com/wp-content/uploads/2024/06/4de812cb-c23e-4a13-8f57-1b0c5cc69727-768x1024.jpg)
ಬಸ್ ತಂಗುದಾಣದ ಸುತ್ತಮುತ್ತ ಕಸದ ರಾಶಿ ಬಿದ್ದಿದ್ದು, ಕಸವನ್ನು ಕಟ್ಟಿ ಇಟ್ಟ ಚೀಲಗಳು ರಾಶಿ ಬೀಳಲಾರಂಬಿಸಿವೆ. ಕಳೆದ 4-5 ದಿನಗಳಿಂದ ಕಸ ಹಾಗೇ ಇದ್ದು ವಿಲೇವಾರಿ ಮಾಡದೆ ವಾಸನೆ ಏಳಲಾರಂಭಿಸಿದೆ. ಇನ್ನು ರೋಗ ಹರಡಲೊಂದೇ ಬಾಕಿ ಎಂಬಂತಾಗಿದೆ. ದಿನಂಪ್ರತಿ ಸಾವಿರಾರು ಯಾತ್ರಾರ್ಥಿಗಳು ಬರವ ತಾಣದಲ್ಲಿ ಗಲೀಜು ತುಂಬಿ ತುಳುಕಲು ಆರಂಭಿಸಿದ್ದು ಯಾತ್ರಾರ್ಥಿಗಳು ಹಿಡಿಶಾಪ ಹಾಕಲು ಆರಂಭಿಸಿದ್ದಾರೆ.
![](https://sullia.suddinews.com/wp-content/uploads/2024/06/c7d0a33c-cba8-4257-bd5d-7c000a39a634-768x1024.jpg)