ಪೂದೆ ದೇವಸ್ಥಾನದಲ್ಲಿ ಕೆಸರ್ ಡ್ ಒಂಜಿ ದಿನ ಕಾರ್ಯಕ್ರಮ ಆಮಂತ್ರಣ ಬಿಡುಗಡೆ

0

ಜುಲೈ 21ರಂದು ಹಿಂದೂ ಬಾಂಧವರು ಮುರುಳ್ಯ ಇದರ ವತಿಯಿಂದ ಕೆಸರ್ ಡ್ ಒಂಜಿ ದಿನ ಕಾರ್ಯಕ್ರಮ ನಡೆಯಲಿದ್ದು ಆ ಪ್ರಯುಕ್ತ ಜೂ.30ರಂದು ಪೂದೆ ಶ್ರೀ ಗಣಪತಿ ಮಲ್ಲಿಕಾರ್ಜುನ ಮತ್ತು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ದೇವಳದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಉಪಾಧ್ಯಾಯರ ವೈದಿಕ ಕಾರ್ಯಕ್ರಮಗಳೊಂದಿಗೆ ಆಮಂತ್ರಣ ಬಿಡುಗಡೆಗೊಂಡಿತ್ತು.

ಹಿಂದೂ ಬಾಂಧವರು ಇದರ ಸಮಿತಿ ಅಧ್ಯಕ್ಷ ಅನೂಪ್ ಬಿಳಿಮಲೆ, ಕಾರ್ಯದರ್ಶಿಗಳಾದ ವಸಂತ ಪೂದೆ , ಜೊತೆ ಕಾರ್ಯದರ್ಶಿಗಳಾದ ಪ್ರತೀಕ್ ಪೂದೆ, ತಾರಾನಾಥ ಪೂದೆ , ಸಂಚಾಲಕ ರೋಹಿತ್ ಹೆದ್ದಾರೆ , ಸಮಿತಿ ಪದಾಧಿಕಾರಿಗಳು , ಸ್ಥಳೀಯರು ಉಪಸ್ಥಿತರಿದ್ದರು.