ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ ಎನ್.ಎಂ.ಸಿ. ಎನ್.ಎಸ್‌‌.ಎಸ್. ಘಟಕಾಧಿಕಾರಿ ಚಿತ್ರಲೇಖ

0

ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ, ನೆಹರು ಮೆಮೋರಿಯಲ್ ಕಾಲೇಜ್ ಸುಳ್ಯ ಇದರ ಎನ್ಎಸ್ಎಸ್ ನ ಘಟಕಾಧಿಕಾರಿ ಶ್ರೀಮತಿ ಚಿತ್ರಲೇಖ ಕೆ.ಎಸ್ ಇವರು ಯುವ ಜನ ಸಬಲೀಕರಣ ಇಲಾಖೆ ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಮತ್ತು ಗಾಂಧಿ ಸ್ಮಾರಕ ನಿಧಿ ಬೆಂಗಳೂರು ಇವರು ಜೂ. 14ರಿಂದ ಜೂ. 20ರ ತನಕ ಆಯೋಜಿಸಿದ ಏಳು ದಿನಗಳ ರಾಷ್ಟ್ರೀಯ ಭಾವ್ಯಕತಾ ಶಿಬಿರದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ತಂಡವನ್ನು ಪ್ರತಿನಿಧಿಸಿದ್ದರು.

ಇವರೊಂದಿಗೆ ಎನ್ಎಸ್ಎಸ್ ವಿದ್ಯಾರ್ಥಿನಿ ಪ್ರಥಮ ಬಿಕಾಂನ ಹವ್ಯಶ್ರೀ ಭಾಗವಹಿಸಿದ್ದು, ಉತ್ತಮ ಎನ್.ಎಸ್.ಎಸ್. ಸ್ವಯಂಸೇವಕಿ ಎಂದು ಗುರುತಿಸಲ್ಪಟ್ಟಿರುತ್ತಾರೆ.