ಬೆಳ್ಳಾರೆ: ಶ್ರೀರಕ್ಷಾ ಸ್ವಸಹಾಯ ಸಂಘದ ಮಹಾಸಭೆ, ನೂತನ ಅಧ್ಯಕ್ಷರಾಗಿ ಪುಷ್ಪಾವತಿ ಕುರುಂಬುಡೇಲು, ಕಾರ್ಯದರ್ಶಿಯಾಗಿ ತುಳಸಿ ಕಿಲಂಗೋಡಿ

0

ನಾಗರಿಕ ಸೇವಾ ಟ್ರಸ್ಟ್ ರಿ, ಗುರುವಾಯನಕೆರೆ ಪ್ರವರ್ತಿತ ಬೆಳ್ಳಾರೆಯ ಪಡ್ಪು ಶ್ರೀರಕ್ಷಾ ಸ್ವಸಹಾಯ ಸಂಘದ 23ನೇ ವಾರ್ಷಿಕ ಮಹಾಸಭೆಯು ಕುರುಂಬುಡೇಲು ಪುಷ್ಪಾವತಿಯವರ ಮನೆಯ ವಠಾರದಲ್ಲಿ ಜೂನ್ 30ರಂದು ನಡೆಯಿತು. ಸಭಾಧ್ಯಕ್ಷತೆಯನ್ನು ಸಂಘದ ಅಧ್ಯಕ್ಷೆ ಕುಸುಮ ಕುರುಂಬುಡೇಲು ವಹಿಸಿ ಲೆಕ್ಕಪತ್ರವನ್ನು ಮಂಡಿಸಿದರು. ಸಂಘದ ಕಾರ್ಯದರ್ಶಿ ಪೂರ್ಣಿಮಾ ಪಡ್ಪು ವಾರ್ಷಿಕ ವರದಿ ಮಂಡಿಸಿದರು.

ಮುಖ್ಯ ಅತಿಥಿಯಾಗಿ ಸುಳ್ಯದ ಸಂತ ಜೋಸೆಫ್ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಕೊರಗಪ್ಪ ಕುರುಂಬುಡೇಲು, ಬೆಳ್ಳಾರೆಯ ಸ್ನೇಹಿತರ ಕಲಾ ಸಂಘದ ಸದಸ್ಯರಾದ ಗಣೇಶ್ ಕುರುಂಬುಡೇಲು ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿದರು. 2024 -25 ರ ಸಾಲಿನ ನೂತನ ಅಧ್ಯಕ್ಷರಾಗಿ ಪುಷ್ಪಾವತಿ ಕುರುಂಬುಡೇಲು, ಕಾರ್ಯದರ್ಶಿಯಾಗಿ ತುಳಸಿ ಕಿಲಂಗೋಡಿ ಆಯ್ಕೆಯಾದರು. ಮೀನಾಕ್ಷಿ ಪನ್ನೆ ಸ್ವಾಗತಿಸಿ, ಕಾರ್ಯದರ್ಶಿ ಪೂರ್ಣಿಮಾ ಪಡ್ಪು ವಂದಿಸಿದರು. ಸವಿತಾ ಬಸ್ತಿಗುಡ್ಡೆ ಕಾರ್ಯಕ್ರಮ ನಿರೂಪಿಸಿದರು. ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.