ಬೆಳ್ಳಾರೆ : ಭೂಕುಸಿತ ಉಂಟಾದ ನವಗ್ರಾಮಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ – ಪರಿಶೀಲನೆ

0

ಬೆಳ್ಳಾರೆಯಲ್ಲಿ ನಿನ್ನೆ ಸುರಿದ ಭಾರೀ ಮಳೆಗೆ ಬೆಳ್ಳಾರೆ ನವಗ್ರಾಮದಲ್ಲಿ ಜಯರಾಮ ಉಮಿಕ್ಕಳ ಎಂಬವರ ಮನೆಯ ಎದುರಿನ ಬರೆ ಕುಸಿದು ಬಿದ್ದಿದ್ದು ಅಪಾಯದಲ್ಲಿರುವ ಮನೆಯನ್ನು ಇಂದು ಶಾಸಕಿ ಭಾಗೀರಥಿ ಮುರುಳ್ಯ ವೀಕ್ಷಿಸಿದರು.


ತಡಗಜೆಯಲ್ಲಿ ಪುಟ್ಟ ಎಂಬವರ ಮನೆಯು ಕುಸಿದು ಬೀಳುವ ಸಂಭವವಿದ್ದು ಈ ಬಗ್ಗೆ ಶಾಸಕರಿಗೆ ಮನವಿ ನೀಡಲಾಯಿತು.
ಮನವಿಗೆ ಸ್ಪಂದಿಸಿದ ಶಾಸಕರು ಅಧಿಕಾರಿಗಳಿಗೆ ತಿಳಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪಂಚಾಯತ್ ಪಿಡಿಒ,ಗ್ರಾಮ ಲೆಕ್ಕಾಧಿಕಾರಿ, ಶ್ರೀನಾಥ ರೈ ಬಾಳಿಲ,ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ಮಾಧವ ತಡಗಜೆ,ವಿಠಲದಾಸ್,ಅನಿಲ್ ರೈ ಚಾವಡಿಬಾಗಿಲು,ಪ್ರೇಮಚಂದ್ರ ಬೆಳ್ಳಾರೆ ಮೊದಲಾದವರಿದ್ದರು.