ಕಳಂಜ ಬಾಳಿಲ ಸಹಕಾರಿ ಸಂಘದ ಚುನಾವಣೆ

0

13 ರಲ್ಲಿ 11 ಸ್ಥಾನ ಗೆದ್ದ ಸಹಕಾರ ಭಾರತಿ, 2 ಸ್ಥಾನ ಪಡೆದುಕೊಂಡ ಸಹಕಾರಿ ಸಮನ್ವಯ ರಂಗ

ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕಾಗಿ ಮುಂದಿನ 5 ವರ್ಷಗಳ ಅವಧಿಗೆ ಚುನಾವಣೆ ಇಂದು ನಡೆದಿದ್ದು, ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳು 11 ಸ್ಥಾನಗಳಲ್ಲಿ ಬಹುಮತ ಪಡೆದರೆ, ಕಾಂಗ್ರೆಸ್ ನಾಯಕ ಕಳಂಜ ವಿಶ್ವನಾಥ ರೈ ನೇತೃತ್ವದ ಸಹಕಾರಿ ಸಮನ್ವಯ ರಂಗ 2 ಸ್ಥಾನಗಳನ್ನು ಗೆದ್ದುಕೊಳ್ಳಲು ಶಕ್ತವಾಯಿತು.


ಸಹಕಾರ ಭಾರತಿಯ ಪ್ರಭಾಕರ ಆಳ್ವ 544, ಅಜಿತ್ ರಾವ್ 523, ರವಿಪ್ರಸಾದ್ ರೈ ಕಳಂಜ 495, ರಾಮಪ್ರಸಾದ್ ಕಾಂಚೋಡು 494, ಹರ್ಷ ಜೋಗಿಬೆಟ್ಟು 466, ಮಹಿಳಾ ಮೀಸಲು ಸ್ಥಾನದಿಂದ ಸರಿತಾ ಕಂಡಿಕಟ್ಟ 552, ಪಂಕಜಾಕ್ಷಿ 549, ಪ್ರವರ್ಗ ಎ ಕ್ಷೇತ್ರದಿಂದ ಪ್ರಶಾಂತ್ ಕುಮಾರ್ 590, ಪ್ರವರ್ಗ ಬಿ ಕ್ಷೇತ್ರದಿಂದ ರವೀಂದ್ರ ಟಪ್ಪಾಲುಕಟ್ಟೆ 398, ಪ.ಪಂಗಡ ಶುಭ ಕುಮಾರ್ ಬಾಳೆಗುಡ್ಡೆ 622, ಪ.ಜಾತಿ ಮೀಸಲು ಕ್ಷೇತ್ರದಿಂದ ರಾಮಣ್ಣ ಪರವ 576 ಮತಗಳನ್ನು ಪಡೆದು ವಿಜೇತರಾದರೆ, ಸಹಕಾರಿ ಸಮನ್ವಯ ರಂಗದ ಅಭ್ಯರ್ಥಿಗಳಾದ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಎನ್. ವಿಶ್ವನಾಥ ರೈ 465 ಹಾಗೂ ಕೆದಿಲ ಸುಬ್ರಾಯ ಭಾರದ್ವಾಜ್ 423 ಮತಗಳನ್ನು ಪಡೆದು ವಿಜೇತರಾಗಿದ್ದಾರೆ.
ಸಹಕಾರ ಭಾರತಿ ವತಿಯಿಂದ 266 ಮತಗಳನ್ನು ಮತ್ತು ಸಮನ್ವಯ ರಂಗದ ವತಿಯಿಂದ 200 ಮತಗಳನ್ನು ನ್ಯಾಯಾಲಯದ ಮೂಲಕ ತರಿಸಿಕೊಂಡಿದ್ದುದರಿಂದ ಮುಂದಿನ ನ್ಯಾಯಾಲಯದ ಆದೇಶ ಬರುವ ತನಕ ಚುನಾವಣಾ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿಲ್ಲ.