ಸಜ್ಜನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ (ನೋಂ) ಇದರ ವತಿಯಿಂದ ದಿನಾಂಕ : 15-2-2025 ರಂದು ಬೆಳಿಗ್ಗೆ 9:30 ರಿಂದ ಸಾಯಂಕಾಲ 5:30ರ ತನಕ ಬೆಂಗಳೂರಿನ ಫಾರ್ಚುನ್ ಸೆಲೆಕ್ಟ್ ಟ್ರಿನಿಟಿ ಹೋಟೆಲ್ ನಲ್ಲಿ ನಡೆಯುವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಸಜ್ಜನ ಕನ್ನಡ ನಾಡು-ನುಡಿ ವಿಭಾಗದ ರಾಜ್ಯ ಸಂಚಾಲಕರಾದ ಶ್ರೀ ಅಡ್ವಕೇಟ್ ಮಂಜುನಾಥ್ ಬಿ ಮತ್ತು ಸಜ್ಜನ ಕನ್ನಡ ನಾಡು-ನುಡಿ ಸಹ ಸಂಚಾಲಕರಾದ ಶ್ರೀ ವಾಸು ಎಂ ರವರು ಬಿಡುಗಡೆ ಗೊಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ (ನೋಂ) ಇದರ ಸ್ಥಾಪಕಾಧ್ಯಕ್ಷರಾದ ಡಾ. ಉಮ್ಮರ್ ಬೀಜದಕಟ್ಟೆ, ಇನೋವಿ ಮೋಬಿಲಿಟಿ ಸೊಲ್ಯೂಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಮಾನವ ಸಂಪನ್ಮೂಲ ಅಧಿಕಾರಿ ಶ್ರೀಮತಿ ಚಾಂದಿನಿ, ಶ್ರೀ ವಿನೋದ್ ಮತ್ತು ಸಜ್ಜನ ಪ್ರತಿಷ್ಠಾನ ನಿರ್ದೇಶಕರಾದ ಮಂಜುನಾಥ್ ಹಿರಿಯೂರು ರವರು ಉಪಸ್ಥಿತರಿದ್ದರು.

“ಸಂಸ್ಥೆಯಲ್ಲಿ ಉತ್ತಮ ಸಂಸ್ಕೃತಿಯನ್ನು ನಿರ್ಮಿಸುವುದು” ಎಂಬ ವಿಷಯದ ಬಗ್ಗೆ ತರಬೇತಿಯನ್ನು ಯೂನಿಕ್ ಕನ್ಸಲ್ಟೆಂಟ್ ಇದರ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಅಶ್ವತ್ ರಾಮಯ್ಯ ರವರು ನಡೆಸಿಕೊಡಲಿದ್ದು, ಶ್ರೀಯುತರು ದೇಶ ವಿದೇಶಗಳಲ್ಲಿ ತರಬೇತಿ ನಡೆಸಿ ಸುಮಾರು ಐದು ಲಕ್ಷಕ್ಕೂ ಅಧಿಕ ಜನರನ್ನು ತರಬೇತಿಗೊಳಿಸಿದ ಜನಪ್ರಿಯ ತರಬೇತುದಾರರಾಗಿದ್ದಾರೆ.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸಾಸ್ಮೋಸ್ ಹೆಟ್ ಟೆಕ್ನಾಲಜಿಸ್ ಲಿಮಿಟೆಡ್ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಶ್ರೀ ರಾಜಶೇಖರ್ ರೈ ರವರು ನೆರವೇರಿಸಲಿದ್ದು, ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ (ನೋಂ) ಇದರ ಸ್ಥಾಪಕಾಧ್ಯಕ್ಷರಾದ ಡಾ. ಉಮ್ಮರ್ ಬೀಜದಕಟ್ಟೆ ರವರು ಅಧ್ಯಕ್ಷತೆಯನ್ನು ವಯಸ್ಸಲ್ಲಿದ್ದು, ಈ ಕಾರ್ಯಕ್ರಮದಲ್ಲಿ ಶಿಕ್ಷಕರು ಸಾಹಿತಿಗಳು ಆದ ಶ್ರೀ ಹೊ. ರಾ. ಪರಮೇಶ್ವರ್ ಅವರು ರಚಿಸಿರುವ ಸಜ್ಜನ ಕನ್ನಡ ಕವಿಗಳು ಎಂಬ ಕೃತಿಯನ್ನು ಸಜ್ಜನ ಕನ್ನಡ ನಾಡು-ನುಡಿ ವಿಭಾಗದ ರಾಜ್ಯ ಸಂಚಾಲಕರಾದ ಶ್ರೀ ಅಡ್ವಕೇಟ್ ಮಂಜುನಾಥ ಬಿ ರವರು ಲೋಕಾರ್ಪಣೆ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಲಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ಅಕೌಂಟಿಂಗ್ ವಿಭಾಗದ ಹಿರಿಯ ನಿರ್ದೇಶಕರು ಶ್ರೀ ಸುಬ್ಬರಾಮು ಟಿ ವಿ, ಹಿರಿಯ ಮಾನವ ಸಂಪನ್ಮೂಲ ಅಧಿಕಾರಿಗಳು ಮತ್ತು ಸಲಹೆಗಾರರಾದ ಶ್ರೀಮತಿ ದಿವ್ಯ, ಹಿರಿಯ ಮಾನವ ಸಂಪನ್ಮೂಲ ಅಧಿಕಾರಿಗಳಾದ ಶ್ರೀ ಇಸ್ಮಾಯಿಲ್ ಝರಾ, ಇನೋವಿ ಮೋಬಿಲಿಟಿ ಸಲ್ಯೂಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಎಚ್ಆರ್ ಮುಖ್ಯಸ್ಥರಾದ ಶ್ರೀ ವಾಸು ಎಂ, ಬುಕ್ಸ್ ಅಂಡ್ ಟ್ಯಾಕ್ಸ್ ಸರ್ವಿಸಸ್ ನ ಸಂಸ್ಥಾಪಕರಾದ ಶ್ರೀ ರವಿ ನಾರಾಯಣ, ಬೀಜದಕಟ್ಟೆ ಅಭಿಮಾನಿಗಳ ಬಳಗ (ನೋಂ) ಯ ಅಧ್ಯಕ್ಷರಾದ ನಟರಾಜು ಬಿ, ಸರಿಟೋರಿಯಸ್ ನ ಮಾನವ ಸಂಪನ್ಮೂಲ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಕಲಂದರ್ ಕೌಶಿಕ್, ಲಗುನ ಕ್ಲೋತಿಂಗ್ ಕಂಪನಿಯ ಎಚ್ಆರ್ ಮುಖ್ಯಸ್ಥರಾದ ಶ್ರೀ ಸದಾಶಿವ, ಹಿರಿಯ ಮಾಧ್ಯಮ ಸಲಹೆಗಾರರಾದ ಶ್ರೀಮತಿ ಕೌಸರ್ ಜಬೀನ, ಬಯೋ ಪ್ಲಸ್ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಎಕ್ಸ್ಪೋರ್ಟ್ ಇಂಪೋರ್ಟ್ ಎಜಿಎಂ ಶ್ರೀ ರತ್ನಾಕರ ಕುಂದರ್, ನೀರಾವರಿ ಇಲಾಖೆ ಸಹಾಯಕ ಅಭಿಯಂತರರಾದ ಶ್ರೀ ತಾಜುದ್ದೀನ್ ಉಬೈದ್, ಒಸ್ಪ್ರೆ ಸೆಕ್ಯೂರಿಟಿ ಸಲ್ಯೂಷನ್ ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಬಿ ಬಿ ಪಾಟೀಲ್ ಹಾಗೂ ಟಿಸಿಎಸ್ ನ ಮಾನವ ಸಂಪನ್ಮೂಲ ವಿಭಾಗದ ಹಿರಿಯ ವ್ಯವಸ್ಥಾಪಕರಾದ ಶ್ರೀಮತಿ ಶ್ರೀವಿದ್ಯಾ ರವರು ಪಾಲ್ಗೊಳ್ಳಲಿರುವರೆಂದು ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ (ನೋಂ) ಇದರ ಕಾರ್ಯಕ್ರಮ ಸಂಯೋಜಕರಾದ ಶ್ರೀ ಶಶಿಕಾಂತ್ ಬೆಡಸೂರು ರವರು ತಿಳಿಸಿದ್ದಾರೆ.