ಸುಳ್ಯ ಜೂನಿಯರ್ ಕಾಲೇಜು ಬಳಿ ವಾಹನ ಸಂಚಾರಕ್ಕೆ ಅಡಚಣೆಯಾಗಿ ನಿರ್ಮಿಸಿದ ರಕ್ಷಣಾ ಗೋಡೆಯನ್ನು ನಿನ್ನೆ ತೆರವುಗೊಳಿಸಿದ ನಗರ ಪಂಚಾಯತ್

0

ಇಂದು ಮತ್ತೆ ಮಣ್ಣು, ಜಲ್ಲಿ ಹಾಕಿ ಮಾಯರವರಿಂದ ತಡೆಗೋಡೆ ನಿರ್ಮಾಣ – ಮತ್ತೆ ತೆರವುಗೊಳಿಸಿದ ನಗರಪಂಚಾಯತ್

ಸುಳ್ಯ ಜೂನಿಯರ್ ಕಾಲೇಜ್ ಕಡೆಯಿಂದ ಜ್ಯೋತಿ ಸರ್ಕಲ್ ಕಡೆಗೆ ಹೋಗುವ ರಸ್ತೆ ಬದಿ ಮಾಯಾ ಎಂಬವರು ಸಾರ್ವಜನಿಕ ರಸ್ತೆಗೆ ಅಡಚಣೆ ಆಗುವ ರೀತಿಯಲ್ಲಿ ಕಂಪೌಂಡಿಗೆ ರಕ್ಷಣಾ ಗೋಡೆ ನಿರ್ಮಿಸಿರುವುದನ್ನು ಸ್ಥಳೀಯರ ದೂರಿನ ಮೇರೆಗೆ ನಗರ ಪಂಚಾಯತ್ ನವರು ಎ.07 ರಂದು ಬಂದು ತೆರವುಗೊಳಿಸಿದ್ದರು.


ಆದರೆ ಇಂದು ನಗರಮಚಾಯತ್ ನವರು ತೆರವುಗೊಳಿಸಿದಲ್ಲಿಗೆ ಮಾಯರವರು ಮತ್ತೆ ರಕ್ಷಣಾ ಗೋಡೆ ನಿರ್ಮಾಣಮಾಡಿದ್ದು ಇದನ್ನು ಕಂಡ ಸಾರ್ವಜನಿಕರು ನಗರ ಪಂಚಾಯತ್ ಗೆ ದೂರು ನೀಡಿದ್ದು ಮತ್ತೆ ರಕ್ಷಣಾಗೋಡೆಯನ್ನು ನಗರ ಪಂಚಾಯತ್ ನವರು ಬಂದು ತೆರವುಗೊಳಿಸಿದ ಘಟನೆ ಎ.08 ರಂದು ನಡೆಯಿತು.


ಮಾಯಾ ಎಂಬವರು ಕಂಪೌಂಡ್ ನ ಆವರಣ ಗೋಡೆಗೆ ತೊಂದರೆಯಾಗಬಾರದೆಂದು ಕಾಂಪೌಂಡ್ ಸುತ್ತ ಕ್ರಾಂಕೀಟ್ ದಿಬ್ಬವನ್ನು ನಿರ್ಮಿಸಿದ್ದರು. ಇದರಿಂದಾಗಿ ಅಲ್ಲಿರುವ ಇತರ ಮನೆಗಳಿಗೆ ಹೋಗುವ ರಸ್ತೆ ಆತಂಕಿತವಾಗಿತ್ತು. ಕಸದ ಲಾರಿ ಸಾಗುವುದು ಕಷ್ಟವಾಗುತ್ತಿತ್ತು.‌ ಸಾರ್ವಜನಿಕರು ಈ ಬಗ್ಗೆ ನ.ಪಂ.ಗೆ ದೂರು ನೀಡಿದ್ದರು. ಸಾರ್ವಜನಿಕರ ದೂರಿನ ಮೇರೆಗೆ ನಗರ ಪಂಚಾಯತ್ ಜನಪ್ರತಿನಿಧಿಗಳು ಹಾಗೂ ಮುಖ್ಯಾಧಿಕಾರಿ, ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಅನಧಿಕೃತ ದಿಬ್ಬವನ್ನು ನಿನ್ನೆ ತೆರವುಗೊಳಿಸಿದ್ದರು.


ಅದೇ ಮನೆಯವರು ತಮ್ಮ ಆವರಣ ಗೋಡೆಯ ಇನ್ನೊಂದು ಪಕ್ಕದಲ್ಲಿ ಹಾಕಿದ್ದ ಮರಳು, ಮರದ ತುಂಡುಗಳನ್ನು ಕೂಡ ನಗರ ಪಂಚಾಯತ್ ನವರ ಕಸವಿಲೆವಾರಿ ವಾಹನದಲ್ಲಿ ತುಂಬಿಸಿ ಕೊಂಡೊಯ್ದಿದ್ದರು.
ಆದರೆ ಇಂದು ಪುನ: ಅದೇ ರೀತಿ ಕಲ್ಲು ,ಹೊಯಿಗೆ ರಸ್ತೆ ಬದಿ ರಾಶಿ ಹಾಕಿ ಸಂಚಾರಕ್ಕೆ ತೊಡಕುಂಟುಮಾಡಿದ್ದು ಇದನ್ನು ಸಾರ್ವಜನಿಕರ ದೂರಿನ ಮೇರೆಗೆ ನಗರ ಪಂಚಾಯತ್
ತೆರವು ಕಾರ್ಯ ಮಾಡಿತು.


ಸಂದರ್ಭದಲ್ಲಿ ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ಮತ್ತು ಸಿಬ್ಬಂದಿಗಳು, ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ ನೀರಬಿದರೆ,ಸದಸ್ಯರಾದ ಸರೋಜಿನಿ ಪೆಲ್ತಡ್ಕ, ಉಮ್ಮರ್ ಕೆ ಎಸ್,ಡೇವಿಡ್ ದೀರಾ ಕ್ರಾಸ್ತ,ಶರೀಫ್ ಕಂಠಿ,ಶೀಲಾವತಿ ಕುರುಂಜಿ,ಕಿಶೋರಿಶೇಟ್ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಪೊಲೀಸ್ ಬಂದೋಬಸ್ತ್ ನಲ್ಲಿ ತೆರವು ಕಾರ್ಯಾಚರಣೆ ನಡೆಯಿತು.