ಸುಳ್ಯದಲ್ಲಿ ಚದುರಂಗ ತರಬೇತಿ ಶಿಬಿರ ಉದ್ಘಾಟನೆ

0

ಸುಳ್ಯದ ಶ್ರೀರಾಮಪೇಟೆಯ ಕಾನತ್ತಿಲ ರಾಮಯ್ಯ ಕಾಂಪ್ಲೆಕ್ಸ್ ನಲ್ಲಿ‌ ಚದುರಂಗ ತರಬೇತಿ ಶಿಬಿರವು ಎ.24 ರಿಂದ ಪ್ರಾರಂಭಗೊಂಡಿದ್ದು ಎ.29 ರವರೆಗೆ ನಡೆಯಲಿದೆ.
ಜಯರಾಮ ದೇರಪ್ಪಜ್ಜನ ಮನೆ ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿದರು.


ಶ್ರೀಮತಿ ವಿನುತಾ ಪಾತಿಕಲ್ಲು ಅವರು ಚೆಸ್ ನಡೆಯನ್ನು ನಡೆಸುವುದರ ಮೂಲಕ ಚಾಲನೆ ನೀಡಿದರು. ಈ ತರಬೇತಿ ಶಿಬಿರದಲ್ಲಿ ಸುಳ್ಳ ತಾಲೂಕಿನ ಸುಮಾರು 40 ಮಕ್ಕಳು ಭಾಗವಹಿಸಿದ್ದು
ಹರಿಪ್ರಸಾದ್ ಕೊಯಿಂಗಾಜೆ ಮತ್ತು ಪುತ್ತೂರಿನ ಸುರೇಶ್ ಬಾಯಾರು ತರಬೇತಿ ನೀಡುತ್ತಿದ್ದಾರೆ.