ಮಂಗಳೂರಿನಲ್ಲಿ ಪ್ರಜಾಸೌಧ ಉದ್ಘಾಟನೆ : ತಾಲೂಕಿನಿಂದ 19 ಬಸ್ ಗಳಲ್ಲಿ ತೆರಳಿದ‌ ಜನರು

0

ಸುಳ್ಯದಲ್ಲಿ ಚಾಲನೆ

ಮಂಗಳೂರಿನಲ್ಲಿ ಪ್ರಜಾಸೌಧ ಜಿಲ್ಲಾಡಳಿತದ ಕಚೇರಿ ಉದ್ಘಾಟನೆ ನಡೆಯಲಿದ್ದು, ತಾಲೂಕಿನಿಂದ 19 ಬಸ್ ಗಳಲ್ಲಿ‌ ಜನರು ತೆರಳಿದ್ದಾರೆ.

ಸುಳ್ಯ ನಗರ ಪಂಚಾಯತ್ ಆವರಣದಿಂದ ಒಂದು‌ಬಸ್ ಜನರು ಮಧ್ಯಾಹ್ನ ಮಂಗಳೂರು ಕಡೆ ಪ್ರಯಾಣ ಬೆಳೆಸಿದರು.

ಈ‌ ಸಂದರ್ಭ ನ.ಪಂ. ಸದಸ್ಯರುಗಳಾದ ಎಂ.ವೆಂಕಪ್ಪ ಗೌಡ, ಡೇವಿಡ್ ಧೀರ ಕ್ರಾಸ್ತ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಅಧಿಕಾರಿಗಳು, ಫಲಾನುಭವಿಗಳು ಇದ್ದರು.